ನಗರದ ಸಾಲೇಶ್ವರ ಭವನದಲ್ಲಿ ನಡೆದ ಸಾರ್ವಜನಿಕ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, 'ಯಾವುದೋ ಒಂದು ಟಿ.ವಿ. ಚಾನಲ್ನಲ್ಲಿ ಇಳಕಲ್ ಹತ್ತಿರದ ಗುಡಲ್ ಎಂಬ ಗ್ರಾಮದಲ್ಲಿ ಮಕ್ಕಳ ಕಳ್ಳರು ಸಿಕ್ಕಿಬಿದ್ದಿದ್ದಾರೆ ಎಂಬ ಆಧಾರ ರಹಿತ ಸುದ್ದಿ ಪ್ರಸಾರವಾಗಿದೆ. ಇದು ಸಂಪೂರ್ಣ ಸುಳ್ಳು ಸುದ್ದಿ. ಮಕ್ಕಳ ಕಳ್ಳತನದ ಯತ್ನವೇ ನಡೆಯದೇ ಇರುವಾಗ ಬಂಧನದ ಪ್ರಶ್ನೆಯೇ ಬರುವುದಿಲ್ಲ. ಯಾರೂ ಭಯಪಡುವ ಅಗತ್ಯವಿಲ್ಲ. ಇಳಕಲ್ ಸಮೀಪ ಅಥವಾ ಹುನಗುಂದ ತಾಲ್ಲೂಕಿನಲ್ಲಿ 'ಗುಡಲ್' ಎನ್ನುವ ಹೆಸರಿನ ಗ್ರಾಮವೇ ಇಲ್ಲ. ಇದು ಕೇವಲ ವದಂತಿಯಷ್ಟೆ. ಅಂತಹ ಯಾವುದೇ ಘಟನೆಗಳು ಸಂಭವಿಸಿಲ್ಲ' ಎಂದು ಸ್ಪಷ್ಟಪಡಿಸಿದರು.