ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕು ರಾಮಗಿರಿ ಗ್ರಾಮದ ಸುತ್ತ ಗುರುವಾರ ರಾತ್ರಿ ಬಿದ್ದ ಭಾರಿ ಮಳೆಗೆ ಅಲ್ಲಿನ ಕೆರೆ ಕೋಡಿ ಬಿದ್ದಿದ್ದು, ಹೆಚ್ಚಾದ ನೀರು ತಾಲ್ಲೂಕಿನ ಕಾಕನೂರು ಗ್ರಾಮದ ಬಳಿಯ ಹಿರೇಹಳ್ಳದಲ್ಲಿ ಏಕಾಏಕಿ ಹರಿದು ಬಂದ ಪರಿಣಾಮ, ನೀರಿನ ರಭಸಕ್ಕೆ ವ್ಯಕ್ತಿ ಕೊಚ್ಚಿ ಹೋದ ಘಟನೆ ಸಂಜೆ ನಡೆದಿದೆ.