ಕರಪತ್ರ ವಿತರಣೆ ವೇಳೆ ಮಾತನಾಡಿದ ಎಸ್ಐ ರವಿಕುಮಾರ್, ‘ಕೆಲ ಕಿಡಿಗೇಡಿಗಳು ಮಕ್ಕಳು ಕಳ್ಳರು ಅಲ್ಲಿ ಬಂದಿದ್ದಾರೆ, ಇಲ್ಲಿ ಬಂದಿದ್ದಾರೆ, ಇಲ್ಲಿ ಸಿಕ್ಕಿದ್ದಾರೆ ಎಂಬ ದೃಶ್ಯಾವಳಿ ಹಾಗೂ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ವದಂತಿ ಸೃಷ್ಟಿಸುತ್ತಿದ್ದಾರೆ. ಇದರಿಂದ ಜಿಲ್ಲೆಯೂ ಸೇರಿದಂತೆ ರಾಜ್ಯದೆಲ್ಲೆಡೆ ಜನ ಭಯಭೀತರಾಗಿದ್ದಾರೆ. ಆದರೆ, ಮಕ್ಕಳ ಕಳ್ಳರು ರಾಜ್ಯಕ್ಕೆ ಬಂದಿದ್ದಾರೆ ಎಂಬ ಸಂಗತಿ ಸುಳ್ಳು. ಸಾರ್ವಜನಿಕರು ಆತಂಕಪಡಬೇಕಿಲ್ಲ’ ಎಂದು ಹೇಳಿದರು.