ಒಟ್ಟಾವ: ಟೊರಾಂಟೊದಲ್ಲಿನ ‘ಬಾಂಬೆ ಭೇಲ್’ ಭಾರತೀಯ ರೆಸ್ಟೋರೆಂಟ್ನಲ್ಲಿ ಕಚ್ಚಾ ಬಾಂಬ್ ಸ್ಫೋಟಿಸಿ ಪರಾರಿಯಾಗಿದ್ದ ಇಬ್ಬರು ಶಂಕಿತರಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.
‘ಇದು ಭಯೋತ್ಪಾದಕರ ಕೃತ್ಯ ಎಂಬುದಕ್ಕೆ ಯಾವುದೇ ಸಾಕ್ಷ್ಯ ಇಲ್ಲ’ ಎಂದು ಪೊಲೀಸ್ ಮುಖ್ಯಸ್ಥ ಜೆನ್ನಿಫರ್ ಇವಾನ್ಸ್ ತಿಳಿಸಿದ್ದಾರೆ. ‘ಶಂಕಿತರು ಸ್ಫೋಟಕದೊಂದಿಗೆ ರೆಸ್ಟೋರೆಂಟ್ ಪ್ರವೇಶಿಸಿರುವುದು ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದೆ’ ಎಂದು ಹೇಳಿದ್ದಾರೆ.