ಪಾಲ್ಗಾರ್: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಅವರು ಧರಿಸಿದ್ದ ಚಪ್ಪಲಿಯಿಂದಲೇ ಹೊಡೆಯಬೇಕು ಎನಿಸಿತ್ತು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಇತ್ತೀಚೆಗೆ ಚುನಾವಣಾ ಪ್ರಚಾರ ನಿಮಿತ್ತ ವಿರಾರ್ಗೆ ಭೇಟಿ ನೀಡಿದ್ದ ಯೋಗಿ, ಮರಾಠ ಚಕ್ರವರ್ತಿ ಶಿವಾಜಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವಾಗ ಚಪ್ಪಲಿಯನ್ನು ಧರಿಸಿದ್ದರು ಎಂದು ಉದ್ಧವ್ ಆರೋಪಿಸಿದ್ದಾರೆ.
ಚಪ್ಪಲಿ ಧರಿಸಿಯೇ ಹೂಮಾಲೆ ಹಾಕಿದ ಯೋಗಿ ಅವರನ್ನು ಶಿವಸೇನಾ ಮುಖವಾಣಿ ‘ಸಾಮ್ನಾ’ದಲ್ಲಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಆತ ಯೋಗಿ ಅಲ್ಲ, ಭೋಗಿ. ಆತ ಒಂದು ವೇಳೆ ಯೋಗಿ ಆಗಿದ್ದರೆ ಎಲ್ಲವನ್ನೂ ತ್ಯಜಿಸಿ ಗುಹೆಯಲ್ಲಿ ಕೂರಬೇಕಿತ್ತು. ಅದನ್ನು ಬಿಟ್ಟು ಅವರು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳಿತಿದ್ದಾರೆ’ ಎಂದು ಉದ್ಧವ್ ಕಿಡಿ ಕಾರಿದ್ದಾರೆ.