ನವದೆಹಲಿ: ತಮಿಳುನಾಡಿನ ತೂತ್ತುಕುಡಿಯಲ್ಲಿರುವ ಸ್ಟೆರ್ಲೈಟ್ ತಾಮ್ರ ಸಂಸ್ಕರಣಾ ಘಟಕವನ್ನು ಪುನರಾರಂಭಿಸುವ ಇಚ್ಛೆಯನ್ನು ಈ ಕಂಪನಿಯ ಮಾತೃಸಂಸ್ಥೆ ವೇದಾಂತ ರಿಸೋರ್ಸಸ್ ಹೊಂದಿದೆ. ಹಾಗೆಯೇ ಕಾರ್ಖಾನೆಯನ್ನು ವಿಸ್ತರಿಸಿ ಉತ್ಪಾದನಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಯೋಜನೆಯನ್ನು ಕಂಪನಿಯು ಕೈಬಿಟ್ಟಿಲ್ಲ ಎಂದು ವೇದಾಂತ ಕಂಪನಿಯ ಭಾರತದ ತಾಮ್ರ ವಹಿವಾಟು ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ರಾಮನಾಥ್ ಹೇಳಿದ್ದಾರೆ.