ಗೌರ(ಬಿ) ಗ್ರಾಮದ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಭೀಮರಾವ್ ಗೌರ ಮಾಹಿತಿ ನೀಡಿ, ‘ಸಣ್ಣ ನೀರಾವರಿ ಇಲಾಖೆಯವರು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಪ್ರತಿವರ್ಷ ಬ್ಯಾರೇಜ್ ಖಾಲಿಯಾಗುತ್ತಿದೆ. ಹೂಳು ತೆಗೆದರೆ ಹೆಚ್ಚಿನ ನೀರು ಸಂಗ್ರಹವಾಗುತ್ತದೆ. ಗೌರ(ಬಿ), ಗೌರ(ಕೆ), ನಂದರಗಿ, ತೆಲ್ಲುಣಗಿ, ಜೇವರ್ಗಿ ಗ್ರಾಮಗಳಿಗೆ ತೊಂದರೆಯಾಗುತ್ತಿದೆ. ಈ ಭಾಗದ ರೈತರ ಬೆಳೆಗಳು ಒಣಗುತ್ತಿವೆ. ಇಲಾಖೆಯವರು ಮಳೆ ಮುಗಿದ ತಕ್ಷಣ ಗೇಟ್ ಹಾಕಬೇಕು. ಗೇಟ್ ಸೋರಿಕೆ ಯಾಗದಂತೆ ನೋಡಿಕೊಳ್ಳಬೇಕು’ ಎಂದು ಹೇಳುತ್ತಾರೆ.