20 ದಿನಗಳ ಕಾಲ ನಡೆದ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ 25 ಮಕ್ಕಳಿಗೆ ನಾಟಕ, ಪರಿಸರ ಅಧ್ಯಯನ, ಒಳಾಂಗಣ ಮತ್ತು ಹೊರಾಂಗಣ ಆಟಗಳು, ನಾಟಕ ಪ್ರವಾಸ ಸೇರಿದಂತೆ ಹಲವು ಬಗೆಯ ತರಬೇತಿ ನೀಡಲಾಯಿತು. ಇದರೊಂದಿಗೆ ಆರ್.ಪವನ್ಕುಮಾರ್ ಬರೆದಿರುವ ‘ನಮ್ಮ ಗಾಂಧಿ ಜಯಂತಿ’ ನಾಟಕವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ದೃಶ್ಯ ಟ್ರಸ್ಟ್ನ ಕೆ.ಆರ್.ಗಿರೀಶ್ ಅವರು ನಿರ್ದೇಶಿಸಿದ್ದಾರೆ. ಇವರಿಗೆ ಚಿಂತಕ ಸುಘೋಷ್ ಕೌಲಗಿ ಸಾಥ್ ನೀಡಿದ್ದಾರೆ.