‘ಗಾಳಿಸುದ್ದಿಗಳಿಗೆ ಕಿವಿಗೊಡಬೇಡಿ: ಜಾಗೃತಿ ಮೂಡಿಸುವುದು ಅಗತ್ಯ’ (ಪ್ರ.ವಾ., ಸಂಪಾದಕೀಯ, ಮೇ 26) ಬರಹ ಇತ್ತೀಚೆಗೆ ನಡೆದಿರುವ ಘಟನೆಗಳ ತೀವ್ರತೆಯನ್ನು ಕಟ್ಟಿಕೊಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬರುವ ಸುದ್ದಿಗಳನ್ನು ನಂಬಿ, ಕೆಲವರು ಬುದ್ಧಿಶೂನ್ಯರಾಗಿ ವರ್ತಿಸುತ್ತಿದ್ದಾರೆ. ಇದು, ಸಾಮಾಜಿಕ ಜಾಲತಾಣಗಳ ದುರುಪಯೋಗದ ಫಲ. ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಂತಹ ವಿಕಾರವಾದಿಗಳನ್ನು, ಜಾಲತಾಣಗಳ ಮೂಲಕ ಹರಿಬಿಡುವ ವಿಕೃತಿಯನ್ನು ಪ್ರಚೋದಿಸುವ ವ್ಯಕ್ತಿಗಳನ್ನು ಹುಡುಕಿ ಕಠಿಣ ಶಿಕ್ಷೆ ವಿಧಿಸಬೇಕು.