‘ಪ್ರಜಾವಾಣಿ ಶೈಕ್ಷಣಿಕ ನೆರವು’ ನಿಧಿಯಿಂದ ನೀಡಿದ ಸ್ಕಾಲರ್ಷಿಪ್ ಕಷ್ಟಕಾಲದಲ್ಲಿ ನೆರವಾಯಿತು. ಪುಸ್ತಕ ಹಾಗೂ ಸಮವಸ್ತ್ರ ಖರೀದಿಸಲು ಸಹಾಯವಾಯಿತು. ಈಗ ಮೈಸೂರಿನ ವಿಜಯ ವಿಠಲ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದೇನೆ. ಎಂಬಿಬಿಎಸ್ ಓದುವ ಗುರಿ ಹೊಂದಿದ್ದೇನೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಬೆಂಬಲಕ್ಕೆ ನಿಂತು, ಪ್ರೋತ್ಸಾಹಿಸುತ್ತಿರುವ ‘ಪ್ರಜಾವಾಣಿ ಶೈಕ್ಷಣಿಕ ನೆರವು’ ನಿಧಿಯ ಈ ಕಾರ್ಯ ನಿರಂತವಾಗಿ ಸಾಗಲಿ.