ಸಾಲ ವಸೂಲಿಗೆ ವೇಷ: ‘ಬಂಧಿತ ಶಿವರಾಜ್, ರಾಯಚೂರಿನವ ಎಂದು ಗೊತ್ತಾಗಿದೆ. ಉದ್ಯೋಗ ಹುಡುಕಿಕೊಂಡು ನಗರಕ್ಕೆ ಬಂದು ನೆಲೆಸಿದ್ದಾನೆ. ಆತ ಸ್ನೇಹಿತನೊಬ್ಬನಿಂದ ಸಾಲ ಪಡೆದುಕೊಂಡಿದ್ದ. ಸಾಲ ವಾಪಸ್ ನೀಡುವಂತೆ ಸ್ನೇಹಿತ ಒತ್ತಾಯಿಸುತ್ತಿದ್ದ. ಹೀಗಾಗಿ, ಆತನ ಮೇಲೆ ಹಲ್ಲೆ ಮಾಡಲು ಈ ರೀತಿಯ ವೇಷದಲ್ಲಿ ಹೊರಟಿದ್ದ’ ಎಂದು ಪೊಲೀಸರು ವಿವರಿಸಿದರು.