‘₹3 ಲಕ್ಷ ಮೌಲ್ಯದ ಚಿನ್ನದ ಉಂಗುರ, ಬಳೆ, ನೆಕ್ಲೇಸ್ ಹಾಗೂ ಸರವನ್ನು ಬ್ಯಾಗ್ನಲ್ಲಿಟ್ಟಿದ್ದೆ. ಅದನ್ನು ನೆಲದ ಮೇಲಿಟ್ಟು, ಉಪನ್ಯಾಸ ಆಲಿಸುತ್ತಿದ್ದೆ. ಅದೇ ವೇಳೆಯಲ್ಲೇ ನನ್ನ ಬ್ಯಾಗ್ ಕದಿಯಲಾಗಿದೆ. ಉಪನ್ಯಾಸ ಮುಗಿದ ಬಳಿಕವೇ ಅದು ನನ್ನ ಗಮನಕ್ಕೆ ಬಂತು. ನಂತರ, ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ನೋಡಿದೆ. ನನ್ನ ಹಿಂದೆ ಕುಳಿತಿದ್ದ ವ್ಯಕ್ತಿಯೇ ಚಿನ್ನಾಭರಣ ಕದ್ದುಕೊಂಡು ಹೋಗಿದ್ದು ಗೊತ್ತಾಯಿತು’ ಎಂದು ಮಂಜೀತ ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ಹೇಳಿದರು.