ಸ್ನೇಹಿತರ ಬಳಿ ಹೇಳಿದ್ದ: 2017ರ ಸೆಪ್ಟಂಬರ್ ಮೊದಲ ವಾರದಲ್ಲಿ ತನ್ನೂರು ತೊರೆದಿದ್ದ ನವೀನ್, ಗೌರಿ ಹತ್ಯೆಯಾದ ನಂತರ ಊರಿಗೆ ಮರಳಿದ್ದ. ಇಷ್ಟು ದಿನ ಎಲ್ಲಿಗೆ ಹೋಗಿದ್ದೆ ಎಂದು ಸ್ನೇಹಿತರು ಕೇಳಿದಾಗ, ‘ಟಿ.ವಿ ನೋಡಲಿಲ್ವ. ಗೌರಿಯನ್ನು ಕೊಂದವರು ನಾವೇ’ ಎಂದು ಹೇಳಿಕೊಂಡಿದ್ದ. ಅಂತೆಯೇ ಕೆಲ ಆಪ್ತರಿಗೂ ಕರೆ ಮಾಡಿ, ‘ಹಿಂದೂ ದೇವತೆಗಳ ಬಗ್ಗೆ ಕೀಳಾಗಿ ಮಾತನಾಡುವ ಎಲ್ಲರನ್ನೂ ಹೊಡೆಯಬೇಕು’ ಎಂದು ಹೇಳಿದ್ದ ಎನ್ನಲಾಗಿದೆ.