ಸಂಜೆಯವರೆಗೆ ಗ್ರಾಮದ ಸುಜಾತ-ಬಸವರಾಜು, ಸಿದ್ದರಾಜು, ಪುಟ್ಟಸ್ವಾಮಿ, ಶಿವಮ್ಮ ಅವರ ತೋಟ ಹಾಗೂ ಹೊಲಗಳಲ್ಲಿ ಮಾವಿನ ಹಣ್ಣು ಕೀಳುವುದು, ಮಣ್ಣು ಅಗೆಯುವುದು, ಮಡಿ ತಯಾರಿಸಿ, ಗೊಬ್ಬರ ಎರಚಿ, ಕೈತೋಟಕ್ಕೆ ಬೀಜ ಬಿತ್ತುವುದು, ನೀರುಣಿಸುವುದು ಇತ್ಯಾದಿ ಕೆಲಸಗಳಲ್ಲಿ ಭಾಗಿಯಾದರು. ಮಾವಿನ ಕಾಯಿ ಬೇಯಿಸಿ ಅಪ್ಪೆಸಾರು ಮಾಡುವ ವಿಧಾನ ಕಲಿತರು.