‘ಸುರೇಶ್ಗೌಡ ಏನು ಬೇಕಾದರೂ ಹೇಳುತ್ತಾನೆ. ನಾವು ಯಾವುದೇ ಪ್ರಕರಣವನ್ನು ಬಿಜೆಪಿ ಕಾರ್ಯಕರ್ತರ ವಿರುದ್ಧ ದಾಖಲಿಸಿಲ್ಲ. ಬದಲಾಗಿ
ಆತನೇ ಶಾಸಕನಾಗಿದ್ದಾಗ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಜನರಿಂದ ಲಂಚ ಪಡೆದಿದ್ದಾನೆ. ಆತ ಸೋತಿದ್ದು, ಸುಮ್ಮನೆ ಇರಬೇಕು. ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಬರಲಿ. 50 ಸಾವಿರ ಜನರನ್ನು ಸೇರಿಸುತ್ತೇನೆ. ಆತನೂ ಮಾತನಾಡಲಿ. ನಾನೂ ಮಾತನಾಡುತ್ತೇನೆ’ ಎಂದು ಬಹಿರಂಗ ಸವಾಲು ಹಾಕಿರುವ ವಿಡಿಯೊ ಹರಿದಾಡುತ್ತಿದೆ.