‘ತೆರವು ಕಾರ್ಯಾಚರಣೆಗೆ ಸಹಕಾರ ನೀಡಬೇಕು’ ಎಂದು ಡಿವೈಎಸ್ಪಿ ಕೆ. ಶಿವಾರೆಡ್ಡಿ ಮನವಿ ಮಾಡಿದರು. ಆದರೆ, ಅದಕ್ಕೆ ಕಿವಿಗೊಡಲಿಲ್ಲ. ಅವರೊಂದಿಗೆ ವಾಗ್ವಾದಕ್ಕಿಳಿದರು. ಮಹಿಳೆಯರು ಗೋಡೆಯ ಒಳಗೆ ನಿಂತು, ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದರು. ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿಕೊಂಡು, ಅಯ್ಯಾಳಿ ಮೂರ್ತಿ ಸೇರಿದಂತೆ ಅವರ ಮನೆಯ ಸದಸ್ಯರನ್ನು ಅಲ್ಲಿಂದ ಎಳೆದೊಯ್ದರು. ಬಳಿಕ ಗೋಡೆಯನ್ನು ನೆಲಸಮಗೊಳಿಸಿದರು.