ದೇವರ ಹರಕೆಗೆ ಎಂದು ಯಾರು ಹುಲಿ, ಸಿಂಹದಂತಹ ಬಲಿಷ್ಠ ಪ್ರಾಣಿಗಳನ್ನು ಬಲಿ ಕೊಡುವುದಿಲ್ಲ. ಆದರೆ, ಮೇಕೆ, ಕುರಿ ಹಾಗೂ ಕೋಳಿಗಳಂತಹ ಸಾಕು ಪ್ರಾಣಿಗಳನ್ನು ಮಾತ್ರ ದೇವರಿಗೆ ಹರಕೆ ರೂಪದಲ್ಲಿ ಬಲಿ ಕೊಡುತ್ತೇವೆ. ಅದೇ ರೀತಿಯಲ್ಲಿ ಸಮಾಜದಲ್ಲಿರುವ ಬಲಿಷ್ಠರನ್ನು ಯಾರು ಮುಟ್ಟುವುದಿಲ್ಲ. ದಲಿತರು, ಮಹಿಳೆಯರಂತಹ ಅಶಕ್ತರು, ದುರ್ಬಲರು, ಹಿಂದುಳಿದವರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮಾಡಲಾಗುತ್ತದೆ. ಅದಕ್ಕಾಗಿ ಸಮಾಜದ ಎಲ್ಲರಲ್ಲಿಯೂ ಬುದ್ಧಿಶಕ್ತಿ ಇದೆ. ಎಲ್ಲ ರೀತಿಯ ಶಕ್ತಿಯನ್ನು ಪಡೆದು ಸಾಧನೆ ಮಾಡಬೇಕು. ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದರು.