ನೆಹರು ಔಟರ್ ರಿಂಗ್ ರೋಡ್ ಅದು. ಹೈದರಾಬಾದ್ ನಗರದಿಂದ ಬೆಂಗಳೂರಿಗೆ ಬರುವಾಗ ಬಿರುಗಾಳಿ, ದೂಳು... ದೂಳಿನಿಂದಲೇ ಅರ್ಧ ಕಂಗೆಟ್ಟಿದ್ದೆವು. ಜೋರು ಮಳೆ. ಕಾರು ಅಡ್ಡಡ್ಡ ಹೋಗುತ್ತಿತ್ತು. ಏನೆಲ್ಲ ನೆನಪುಗಳು.. ಮನೆಯಲ್ಲಿ ಮಕ್ಕಳಿವೆ. ಅಪ್ಪ–ಅಮ್ಮ
ನನ್ನನ್ನೇ ನೆಚ್ಚಿಕೊಂಡಿದ್ದಾರೆ. ಆಗಾಗ ಅಮ್ಮ ಹೇಳುವ ಮಾತು, ನಮ್ಮಿಡೀ ಕುಟುಂಬದ ಕೇಂದ್ರಬಿಂದು ನೀನು, ಏನಾದರೂ ಆದರೆ ಇಡೀ ಕುಟುಂಬವೇ ಚದರುತ್ತದೆ... ಅದ್ಯಾಕೋ ಕಣ್ಣೀರು.. ಬರೀ ನೀರು.. ಒಳಗೂ ಹೊರಗೂ...