‘48 ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್, ದೇಶಕ್ಕೆ ಏನು ಕೊಡುಗೆ ನೀಡಿದೆ ಎಂಬುದನ್ನು ಜನರ ಎದುರಿಗೆ ಇಡಲಿ. ಬಿಜೆಪಿಯ 48 ತಿಂಗಳ ಆಡಳಿತ ಕುರಿತು ಕಿರುಹೊತ್ತಿಗೆ ತಯಾರಿಸಲಾಗಿದೆ; ಅದನ್ನು ಶನಿವಾರ ಮೈಸೂರಿನಲ್ಲಿ ಸುತ್ತೂರು ಸ್ವಾಮೀಜಿಯವರಿಗೆ ಹಸ್ತಾಂತರ ಮಾಡುತ್ತೇನೆ. ಕೊಡಗಿನ ಇಬ್ಬರು ಶಾಸಕರೂ ಅದನ್ನು ಜನರಿಗೆ ತಲುಪಿಸಲಿ ಎಂದು ಕೋರಿದರು.