ಮಡಿಕೇರಿ ಹಾಗೂ ಸೋಮವಾರ ಪೇಟೆ ಸಂಪರ್ಕ ಕಲ್ಪಿಸುವ ಹಚ್ಚಿನಾಡು –ಹಟ್ಟಿಹೊಳೆ ರಸ್ತೆ ಕಾಮಗಾರಿಗೆ ನಮ್ಮ ಗ್ರಾಮ ನಮ್ಮ ಯೋಜನೆಯಡಿ ₹ 10.5 ಕೋಟಿ ಅನುದಾನದಲ್ಲಿ ರಸ್ತೆ ಕಾಮಗಾರಿ ನಡೆಸಲಾಗುತ್ತಿತ್ತು. 10 ಕಿ.ಮೀ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದ್ದಾಗ ಸಮೀಪದ ಹೊಳೆಯ ಪ್ರವಾಹದಿಂದ ಬರೆ ಕುಸಿದು ರಸ್ತೆಗೆ ಅಲ್ಲಲ್ಲಿ ಬಿದ್ದು ಪ್ರಗತಿಯಲ್ಲಿದ್ದ ರಸ್ತೆಗೆ ಹಾನಿಯಾಗಿದೆ. ರಸ್ತೆಗೆ ಬಿದ್ದ ಮರ, ಮಣ್ಣನ್ನು ಜೆಸಿಬಿಯಿಂದ ತೆಗೆಯುವ ಕೆಲಸದಲ್ಲಿ ಕಾರ್ಮಿಕರು ಮುಂದಾಗಿದ್ದಾರೆ.