ವಿಜಯಪುರದಲ್ಲಿ ಈಚೆಗೆ ನಡೆದ ಸಚಿವರ ಅಭಿನಂದನಾ ಸಮಾರಂಭದಲ್ಲಿ ಮೊದಲು ಮಾತನಾಡಿದ ಮಾಜಿ ಸಚಿವ ಸಿ.ಎಸ್.ನಾಡಗೌಡ, ‘ಸಚಿವ ಶಿವಾನಂದ ಪಾಟೀಲ ನನಗೆ ಮೊದಲಿನಿಂದಲೇ ಗೊತ್ತು. ಕಾಂಗ್ರೆಸ್ಗೆ ಕರೆ ತಂದು ನನ್ನ ಹಾಳು ಮಾಡಿದ್ರಿ, ಬೇರೆ ಪಕ್ಷದಲ್ಲಿದ್ದಿದ್ದರೆ ಡಿಸಿಎಂ ಆಗಿರುತ್ತಿದ್ದೆ ಅಂತ ಆಗಾಗ ಬೈತಿದ್ರು. ಆದ್ರೂ, ‘ನಿಮ್ಮನ್ ಬಿಟ್ಟ್ ಎಲ್ಲಿಗೂ ಹೋಗಲ್ಲಾರೀ’ ಅಂದಿದ್ರು. ಅವರ ನಂಬಿಕೆಯಂತೆ ಕಾಂಗ್ರೆಸ್ ಇದೀಗ ಸಚಿವ ಸ್ಥಾನ ನೀಡುವ ಮೂಲಕ ಅವರನ್ನು ಗೌರವಿಸಿದೆ’ ಎಂದರು.