ಬೆಟ್ಟದ ಸಾಲುಗಳ ನಡುವೆ ಇರುವ ಈ ಕ್ಷೇತ್ರವನ್ನು ತಲುಪಲು ಕಾಲುದಾರಿಯನ್ನೇ ಆಶ್ರಯಿಸಬೇಕು. ದಟ್ಟ ಅರಣ್ಯ ಪ್ರದೇಶದ ಮಧ್ಯಭಾಗದಲ್ಲಿರುವ ಭಕ್ತಿ ತಾಣವು, ತನ್ನ ಸುತ್ತಲೂ ವೈವಿಧ್ಯ ಜೀವಿಸಂಕುಲಗಳನ್ನು ಹೊಂದಿದೆ. ಆದರೆ, ಇಲ್ಲಿಗೆ ಬರುವಂತಹ ಭಕ್ತರಿಗೆ ಕಾಡು ಪ್ರಾಣಿಗಳಿಂದ ತೊಂದರೆಯಾಗಿರುವ ಉದಾಹರಣೆ ಇಲ್ಲ. ಇದು ಕ್ಷೇತ್ರದ ಮಹಿಮೆ ಎಂಬುದು ಭಕ್ತರ ನಂಬಿಕೆ.