ಉತ್ತರ ಕಾವೇರಿ ಸೇತುವೆ ಮತ್ತು ವೆಲ್ಲೆಸ್ಲಿ ಸೇತುಗೆ ನಡುವೆ ಶ್ರಮದಾನ ನಡೆಯಿತು. 100ಕ್ಕೂ ಹೆಚ್ಚು ಮಂದಿ ಶ್ರಮದಾನ ನಡೆಸಿದರು. ನದಿಯಲ್ಲಿ ಬಿದ್ದಿದ್ದ ಜೊಂಡು, ಕತ್ತೆಕಿವಿ ಸಸ್ಯ, ವಿವಿಧ ಬಳ್ಳಿಗಳನ್ನು ಕುಡುಗೋಲು, ಮಚ್ಚು, ಲೋಟಿ ಗಳದ ಸಹಾಯದಿಂದ ಕತ್ತರಿಸಿ ತೆಗೆದರು. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ನಿರಂತರವಾಗಿ ಶ್ರಮದಾನ ನಡೆಯಿತು.