ಶಹಜಾನ್ಪುರ್: ಉತ್ತರ ಪ್ರದೇಶದ ಶಹಜಹಾನ್ ಜಿಲ್ಲೆಯಲ್ಲಿ ರೈತರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳು ರೈತರು ಮತ್ತು ಬಡವರನ್ನು ಕಡೆಗಣಿಸಿ ಪ್ರಧಾನಿ ಕುರ್ಚಿಯ ಮೋಹದಲ್ಲಿವೆ ಎಂದಿದ್ದಾರೆ.
ಶಹಜಹಾನ್ಪುರ್ನಲ್ಲಿಶನಿವಾರ ಮಧ್ಯಾಹ್ನ ನಡೆದ ಕಿಸಾನ್ ಕಲ್ಯಾಣ್ ರ್ಯಾಲಿಯಲ್ಲಿ ಭಾಗವಹಿಸುವ ಮುನ್ನ ಮೋದಿ ಈ ರೀತಿ ಟ್ವೀಟ್ ಮಾಡಿದ್ದರು.
ನಾನು ನಮ್ಮ ರೈತರೊಂದಿಗೆ ಸಮಯ ಕಳೆಯಲು ಇಷ್ಟಪಡುತ್ತೇನೆ, ಅವರ ಕಠಿಣ ಪರಿಶ್ರಮದಿಂದಾಗಿ ಭಾರತ ಇಷ್ಟೊಂದು ಅಭಿವೃದ್ಧಿ ಹೊಂದಿದೆ, ಇಂದು ಮಧ್ಯಾಹ್ನ ಉತ್ತರ ಪ್ರದೇಶದ ಶಹಜಾನ್ಪುರ್ನಲ್ಲಿ ಕಿಸಾನ್ ಕಲ್ಯಾಣ್ ರ್ಯಾಲಿಯಲ್ಲಿ ಭಾಗವಹಿಸಲಿದ್ದೇನೆ.
I always enjoy being with our farmers. It is due to their hardwork that India has achieved so much. Going to Shahjahanpur in Uttar Pradesh to address a Kisan Kalyan Rally this afternoon.
ರ್ಯಾಲಿಯಲ್ಲಿ ಮೋದಿ ಹೇಳಿದ್ದೇನು? * ತಮ್ಮ ಸರ್ಕಾರದ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ವಿಪಕ್ಷಗಳ ಬಳಿ ಕಾರಣಗಳು ಇಲ್ಲದೇ ಇರುವುದರಿಂದ ಲೋಕಸಭೆಯಲ್ಲಿ ತಾವು ರಾಹುಲ್ ಗಾಂಧಿಯಿಂದ ಅನಗತ್ಯ ಅಪ್ಪುಗೆ ಪಡೆಯಬೇಕಾಯಿತು
*ಅವಿಶ್ವಾಸ ನಿರ್ಣಯ ಯಾಕೆ ಎಂದು ಕೇಳಿದರೆ ಅವರ ಬಳಿ ಉತ್ತರವಿರಲಿಲ್ಲ, ಹಾಗಾಗಿ ಅವರು ಅಪ್ಪುಗೆ ನೀಡಿದರು.
*ಒಂದು ದಳ (ಪಕ್ಷ) ಇನ್ನೊಂದರ ಜತೆ ಸೇರಿದರೆ ಅದು ದಳ-ದಳ (ಕೆಸರಿನಲ್ಲಿ) ಆಗುತ್ತದೆ, ಕಮಲ ಅರಳಲು ಇದು ಒಳ್ಳೆಯದು.
*ಈ ಹಿಂದಿನ ಸರ್ಕಾರ ರೈತರಿಗೆ ಸಹಾಯ ಮಾಡಿಲ್ಲ
*ಕಾಕಂಬಿಯಿಂದ ಎಥೆನಾಲ್ ಮತ್ತು ಕಬ್ಬಿನ ಹಾಲನ್ನು ತಯಾರಿಸಲು ಮೊದಲ ಬಾರಿ ನಮ್ಮ ಸರ್ಕಾರ ಮಿಲ್ಲುಗಳಿಗೆ ಅನುಮತಿ ನೀಡಿತು.
*ನಾವು ಅಧಿಕಾರಕ್ಕೆ ಬರುವ ಮುನ್ನ ಭಾರತದಲ್ಲಿ ತಯಾರಾಗುತ್ತಿದ್ದ ಎಥೆನಾಲ್ ಪ್ರಮಾಣ 40 ಕೋಟಿ ಲೀಟರ್ ಆಗಿತ್ತು. ಈಗ ಅದು 160 ಕೋಟಿ ಲೀಟರ್ ಆಗಿದೆ.