ಸಂಜೆ ಚೆನ್ನೈನ ಸಿಕ್ಕಿಲ್ ಗುರುಚರಣ್ ಅವರ ಸಂಗೀತ ಕಛೇರಿ ಶೋತೃಗಳನ್ನು ಮಂತ್ರಮುಗ್ದರನ್ನಾಗಿ ಮಾಡಿತ್ತು. ಲಯಬದ್ಧವಾಗಿ ನುಡಿಸುತ್ತಿದ್ದ ಎಲ್.ರಾಮಕೃಷ್ಣನ್ ಪಿಟೀಲು, ಸುಮೇಶ್ ನಾರಾಯಣನ್ ಮೃದಂಗ, ರಾಜಶೇಖರ್ ಮೋರ್ಸಿಂಗ್ಗೆ ಸಂಗೀತಪ್ರಿಯರು ಮನಸೋತರು. ಚೆನ್ನೈನ ಶಶಾಂಕ್ ಕೊಳಲು ವಾದನ ಶೋತೃಗಳು ತಮ್ಮನ್ನು ತಾವೇ ಮರೆತು ಆಲಾಪನೆ ಮಾಡುತ್ತಿದ್ದರು. ಅವರ ಕೊಳಲುವಾದನಕ್ಕೆ ನಿಶಾಂತ್ ಚಂದ್ರನ್ ಪಿಟೀಲು, ಜಯಚಂದ್ರರಾವ್ ಮೃದಂಗ, ಗಿರಿಧರ್ ಉಡುಪ ಘಟಂ ಸಾಥ್ ನೀಡಿದವು.