‘ಕೃಷ್ಣನಿಗೆ ಪೂತನಿಯು ಎದೆಹಾಲನ್ನು ಉಣಿಸಿ ಸಂಹರಿಸಲು ಪ್ರಯತ್ನಿಸಿದಳು. ಆದರೆ ಬಾಲ ಕೃಷ್ಣ ಅವಳ ಎದೆಹಾಲು ಕುಡಿಯುತ್ತಾ ಆಕೆಯನ್ನೇ ಅಪಹರಿಸಿ ಶಿಕ್ಷಿಸಿದ. ಅವಳ ಪಾಪಕ್ಕೆ ತಕ್ಕ ಶಿಕ್ಷ ಕೊಟ್ಟ. ಆ ನಂತರ ಗೋಪಿಕೆಯರು ಕೃಷ್ಣನನ್ನು ಗೋಮೂತ್ರದಿಂದ ಸ್ನಾನ ಮಾಡಿಸಿ ರಕ್ಷೆ ಮಾಡಿದರು. ಗೋವಿನ ಬಾಲದಿಂದ ದೃಷ್ಟಿ ತೆಗೆದರು ಎಂದು ಭಾಗವತದಲ್ಲಿ ಉಲ್ಲೇಖಿಸಲಾಗಿದೆ. ಇದು ಗೋವಿನ ಮಹತ್ವ ತಿಳಿಸುತ್ತದೆ’ ಎಂದರು.