ಚಾಮರಾಜನಗರ: ಸತ್ಯಮಂಗಲ ಅರಣ್ಯದ ಬಣ್ಣಾರಿ ಘಾಟಿ ರಸ್ತೆಯಲ್ಲಿ ಎರಡು ಚಿರತೆಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿಣ್ಣಾಟವಾಡುತ್ತಾ ಸವಾರರಲ್ಲಿ ಆತಂಕ ಉಂಟು ಮಾಡಿದ ಘಟನೆ ಬುಧವಾರ ಸಂಜೆ ನಡೆದಿದೆ.
ಘಾಟಿಯ 27ನೇ ತಿರುವಿನಲ್ಲಿ ಎರಡು ಚಿರತೆಗಳು ಬಹಳ ಹೊತ್ತು ರಸ್ತೆಯ ಮಧ್ಯದಲ್ಲೆ ಆಟವಾಡುತ್ತಿದ್ದುದನ್ನು ನೋಡಿ ವಾಹನ ಸವಾವರು ಗಾಬರಿಗೊಳಗಾದರು. ಇದರಿಂದ ಅರ್ಧಗಂಟೆಗೂ ಹೆಚ್ಚು ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಯಿತು.
ನಂತರ ಸತ್ಯಮಂಗಲ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಆಟವಾಡುತ್ತಿದ್ದ ಚಿರತೆಗಳನ್ನು ಕಾಡಿಗೆ ಅಟ್ಟಿದರು. ನಂತರ ವಾಹನಗಳ ಸಂಚಾರ ಸಹಜ ಸ್ಥಿತಿಗೆ ಬಂತು.