‘ಗರುಡ ಆಳ್ವಾರ್ ಮಂಟಪಂ’ನಲ್ಲಿ ದೈನಂದಿನ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದ ನಂತರ, ಗರ್ಭಗುಡಿಗೆ ತೆರಳುತ್ತಿದ್ದ ಸಮಯದಲ್ಲಿ ಅರ್ಚಕರು ಆಯತಪ್ಪಿ ಬಿದ್ದರು. ಹೀಗಾಗಿ ಅವರ ಕೈಯಲ್ಲಿದ್ದ ಉತ್ಸವಮೂರ್ತಿ ಕಲ್ಲಿನ ಹಾಸಿನ ಮೇಲೆ ಬಿದ್ದಿದೆ. ನಂತರ ವಿಶೇಷ ಪೂಜೆ ಸಲ್ಲಿಸಿದ ದೇವಾಲಯದ ಪ್ರಧಾನ ಅರ್ಚಕರು, ಉತ್ಸವಮೂರ್ತಿಯನ್ನು ವೆಂಕಟೇಶ್ವರ ಮೂರ್ತಿ ಇರುವ ಗರ್ಭಗುಡಿಯಲ್ಲಿ ಇರಿಸಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.