ಹೊರ್ತಿ: ಒಂದು ಎಕರೆ ಬರಡು ಭೂಮಿ. ಸಮತಟ್ಟುಗೊಳಿಸುವಲ್ಲೇ ಹೈರಾಣ. ಛಲ ಬಿಡದ ತ್ರಿವಿಕ್ರಮನಂತೆ ಹೊಸ ಮಣ್ಣು ಹಾಕಿ, ಅದರೊಳಗೆ ಕೊಟ್ಟಿಗೆ ಗೊಬ್ಬರ, ಕುರಿ–ಮೇಕೆ ಗೊಬ್ಬರ ತುಂಬಲು ₹ 50,000 ಖರ್ಚು. ಈ ಭೂಮಿಗೆ ಸೌತೆ ಬೀಜ ಹಾಕಿ, ಹನಿ ನೀರಾವರಿಯಲ್ಲಿ ನೀರುಣಿಸಿ, ಖರ್ಚು ಕಳೆದು ₹ 1 ಲಕ್ಷ ಲಾಭ ಗಳಿಸಿದ್ದಾರೆ ಇಂಚಗೇರಿಯ ಬಸವರಾಜ ನಾವಿ.