<p>ಹೊಳೆನರಸೀಪುರ: ಬೇಸಾಯಕ್ಕೆ ಕೆಲಸ ಮಾಡಲು ಜನರು ಸಿಗದ ಈ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಸಾವಿರಾರು ಕುಟುಂಬಗಳು ಹೈನುಗಾರಿಕೆಯಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.</p>.<p>ಸೋಮವಾರ ತಾಲ್ಲೂಕಿನ ಬೆಟ್ಟದ ಸಾತೇನಹಳ್ಳಿಯಲ್ಲಿ ಕೆಎಂಎಫ್ ಹಾಲು ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ‘ಕೆಎಂಎಫ್ ಹೈನುಗಾರಿಕೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಒಂದು ಲೀಟರ್ ಹಾಲಿಗೆ ₹7 ಬೆಂಬಲ ಬೆಲೆ ನೀಡುತ್ತಿದೆ. ಬೇಸಾಯ ಸಾಧ್ಯ ಇಲ್ಲದವರು ಹೈನುಗಾರಿಕೆಗೆ ತೊಡಗಿಸಿ ಕೊಳ್ಳಿ’ ಎಂದು ಸಲಹೆ ನೀಡಿದರು.</p>.<p>‘ಯಾರಾದರೂ ಹಸುಗಳನ್ನು ಖರೀದಿಸಿ ಬದುಕು ರೂಪಿಸಿಕೊಳ್ಳಬಯಸಿದರೆ ವಾರ್ಷಿಕ 7ರ ಬಡ್ಡಿಯಲ್ಲಿ 2 ಹಸುಗಳಿಗೆ ₹1 ಲಕ್ಷ ಸಾಲ ನೀಡುತ್ತೇವೆ. ನಿಮ್ಮೂರಿನಲ್ಲಿ ಪ್ರಾರಂಭಿಸಿರುವ ಡೇರಿಗೆ ನೀವು ಹಾಲನ್ನು ಹಾಕಿ ಹಣ ಗಳಿಸಬಹುದು’ ಎಂದರು.</p>.<p>ಕೆ.ಎಂ.ಎಫ್ನ ವಿಸ್ತರಣಾಧಿಕಾರಿಗಳಾದ ಪುರುಷೋತ್ತಮ್, ಪ್ರಕಾಶ್, ಗ್ರಾಮದ ಮುಖಂಡರಾದ ಎಲ್.ಐ.ಸಿ ಬಸಪ್ಪ, ಖರೀದಿ ಕೇಂದ್ರದ ಮೋಹನ್ರಾಜು, ನ್ಯಾಯಬೆಲೆ ಅಂಗಡಿ ಚಂದ್ರಣ್ಣ, ನಿವೃತ್ತ ಶಿಕ್ಷಕ ಬಿ.ಚಂದ್ರಪ್ಪ, ಮೋಹನ, ಸುರೇಶ್, ಮಹೇಶ, ಹೇಮಾ ಲೋಕೇಶ್ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-36-206467731</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಳೆನರಸೀಪುರ: ಬೇಸಾಯಕ್ಕೆ ಕೆಲಸ ಮಾಡಲು ಜನರು ಸಿಗದ ಈ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಸಾವಿರಾರು ಕುಟುಂಬಗಳು ಹೈನುಗಾರಿಕೆಯಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.</p>.<p>ಸೋಮವಾರ ತಾಲ್ಲೂಕಿನ ಬೆಟ್ಟದ ಸಾತೇನಹಳ್ಳಿಯಲ್ಲಿ ಕೆಎಂಎಫ್ ಹಾಲು ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ‘ಕೆಎಂಎಫ್ ಹೈನುಗಾರಿಕೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಒಂದು ಲೀಟರ್ ಹಾಲಿಗೆ ₹7 ಬೆಂಬಲ ಬೆಲೆ ನೀಡುತ್ತಿದೆ. ಬೇಸಾಯ ಸಾಧ್ಯ ಇಲ್ಲದವರು ಹೈನುಗಾರಿಕೆಗೆ ತೊಡಗಿಸಿ ಕೊಳ್ಳಿ’ ಎಂದು ಸಲಹೆ ನೀಡಿದರು.</p>.<p>‘ಯಾರಾದರೂ ಹಸುಗಳನ್ನು ಖರೀದಿಸಿ ಬದುಕು ರೂಪಿಸಿಕೊಳ್ಳಬಯಸಿದರೆ ವಾರ್ಷಿಕ 7ರ ಬಡ್ಡಿಯಲ್ಲಿ 2 ಹಸುಗಳಿಗೆ ₹1 ಲಕ್ಷ ಸಾಲ ನೀಡುತ್ತೇವೆ. ನಿಮ್ಮೂರಿನಲ್ಲಿ ಪ್ರಾರಂಭಿಸಿರುವ ಡೇರಿಗೆ ನೀವು ಹಾಲನ್ನು ಹಾಕಿ ಹಣ ಗಳಿಸಬಹುದು’ ಎಂದರು.</p>.<p>ಕೆ.ಎಂ.ಎಫ್ನ ವಿಸ್ತರಣಾಧಿಕಾರಿಗಳಾದ ಪುರುಷೋತ್ತಮ್, ಪ್ರಕಾಶ್, ಗ್ರಾಮದ ಮುಖಂಡರಾದ ಎಲ್.ಐ.ಸಿ ಬಸಪ್ಪ, ಖರೀದಿ ಕೇಂದ್ರದ ಮೋಹನ್ರಾಜು, ನ್ಯಾಯಬೆಲೆ ಅಂಗಡಿ ಚಂದ್ರಣ್ಣ, ನಿವೃತ್ತ ಶಿಕ್ಷಕ ಬಿ.ಚಂದ್ರಪ್ಪ, ಮೋಹನ, ಸುರೇಶ್, ಮಹೇಶ, ಹೇಮಾ ಲೋಕೇಶ್ ಭಾಗವಹಿಸಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260401-36-206467731</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>