ನವದೆಹಲಿ: ಇಲ್ಲಿನ ಏಮ್ಸ್ನಲ್ಲಿ ಮೇ 14ರಂದು ಮೂತ್ರಪಿಂಡ ಕಸಿಗೆ ಒಳಗಾಗಿದ್ದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ತೀವ್ರ ನಿಗಾ ಘಟಕದಿಂದ ವಾರ್ಡ್ಗೆ ಸ್ಥಳಾಂತರಿಸಲಾಗಿದೆ.
ಜೇಟ್ಲಿ ಅವರ ದೂರದ ಸಂಬಂಧಿ ಮಹಿಳೆಯೊಬ್ಬರು ಸಚಿವರಿಗೆ ಮೂತ್ರಪಿಂಡ ದಾನ ಮಾಡಿದ್ದಾರೆ ಎಂದು ಏಮ್ಸ್ ಮೂಲಗಳು ತಿಳಿಸಿವೆ.
ಅಪೊಲೊ ಆಸ್ಪತ್ರೆಯ ಡಾ. ಸಂದೀಪ್ ಗುಲೆರಿಯಾ, ಶಸ್ತ್ರಚಿಕಿತ್ಸಕ ವಿ.ಕೆ. ಬನ್ಸಾಲ್, ಡಾ. ಸಂದೀಪ್ ಮಹಾಜನ್ ಹಾಗೂ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ಇದ್ದ 20 ತಜ್ಞ ವೈದ್ಯರ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿತ್ತು.