ಕೃಷಿ ಕೆಲಸಕ್ಕೆ ಸಿಗುತ್ತಿಲ್ಲ
‘ಸದ್ಯ ಗದ್ದೆಗಳಲ್ಲಿ ಶುಂಠಿ ಹಾಕುವ ಹಾಗೂ ಕೀಳುವ ಕೆಲಸ ಭರದಿಂದ ಸಾಗಿದೆ. ಮಧ್ಯಾಹ್ನದ ಬಿಸಿಲಿಗೆ ಕಾರ್ಮಿಕರು ಕೈಕೊಡುತ್ತಿದ್ದಾರೆ. ಹೆಚ್ಚಿನ ದರ ನೀಡಿದರೂ ಬರಲು ಹಿಂದೇಟು ಹಾಕುತ್ತಾರೆ. ಹೆಚ್ಚಿನ ದರ ನೀಡಿ, ಅರ್ಧ ದಿನ ಮಾತ್ರ ಕೆಲಸ ಮಾಡಿಸಿಕೊಳ್ಳಬೇಕಾಗಿದೆ. ಅಡಿಕೆ ತೋಟಕ್ಕೆ ನಿರಂತರವಾಗಿ ನೀರು ಹಾಯಿಸಬೇಕಾಗಿದೆ. ನೀರು ಹಾಯಿಸಿದಷ್ಟೇ ವೇಗದಲ್ಲಿ, ಬಿಸಿಲಿಗೆ ಭೂಮಿ ಒಣಗುತ್ತಿದೆ. ಮಳೆಯಾದರೆ ಮಾತ್ರ, ತಾತ್ಕಾಲಿಕ ಪರಿಹಾರ ಸಿಕ್ಕಂತಾಗುತ್ತದೆ’ ಎಂದು ರೈತ ಫಕ್ಕೀರಪ್ಪ ಹೊಸಮನಿ ಹೇಳಿದರು.