‘ಕಾಂಡ ರಸ ಸೋರುವ ರೋಗ ಮಿತಿಮೀರಿದ ಕಳೆನಾಶಕ ಹಾಗೂ ರಾಸಾಯನಿಕ ಬಳಕೆಯಿಂದ ಬರುತ್ತದೆ. ಮಣ್ಣಿನಲ್ಲಿನ ಉಪಯುಕ್ತ ಬ್ಯಾಕ್ಟೀರಿಯಾ ನಾಶಗೊಳ್ಳುವುದರಿಂದ ರೋಗ ಉಲ್ಬಣಿಸುತ್ತದೆ. ಕಪ್ಪು ಮಣ್ಣಿನಲ್ಲಿ ಹೆಚ್ಚಾಗಿ ಕಂಡುಬರುವುದರಿಂದ ಮಣ್ಣಿನ ನಿರ್ವಹಣೆ ಮೂಲಕ ರೋಗ ನಿವಾರಿಸಬಹುದು’ ಎಂದು ಚನ್ನಗಿರಿಯ ಹಿರಿಯ ತೋಟ
ಗಾರಿಕಾ ಅಧಿಕಾರಿ ರೋಹಿತ್ ಸಲಹೆ ನೀಡಿದರು. ಈ ರೋಗಕ್ಕೆ 2 ಎಂ.ಎಲ್ ಎಕ್ಸಾಕೊನೊಜೋಲ್ ಅನ್ನು ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಒಂದು ಗಿಡದ ಬುಡಕ್ಕೆ 5 ಲೀಟರ್ ಹಾಕಬೇಕು. ಟ್ರೈಕೊಡರ್ಮಾ, ಸುಡೊಮಾನಸ್, ವ್ಯಾಮ್ ಇತ್ಯಾದಿ ಜೈವಿಕ ರೋಗ ನಿಯಂತ್ರಕಗಳನ್ನು ಬಳಸಬೇಕು.