‘ಅಲ್ಲಿ’ನ ಯುದ್ಧದ ಬಿಕ್ಕಟ್ಟಿನಿಂದ ‘ಇಲ್ಲಿ’ ರಸಗೊಬ್ಬರಕ್ಕೆ ಕೊರತೆಯಾಗುತ್ತಿದೆ. ಹಾಗಾಗಿ ರೈತರು ಸಾವಯವ ಕೃಷಿ ಮಾಡುವಂತೆ ಪ್ರಧಾನಿಯವರು ಕರೆ ನೀಡಿದ್ದಾರೆ. ಆದರೆ, ಕಕ್ಕೇರಾದ ದೇವೇಂದ್ರಪ್ಪ ಭೋಯಿ, 16 ವರ್ಷಗಳಿಂದ ಡಯಂಚ, ಅಜೋಲಾದಂತಹ ಜೈವಿಕ ಗೊಬ್ಬರ ಬಳಸಿಕೊಂಡು, ಕಡಿಮೆ ಖರ್ಚಿನಲ್ಲಿ ಭತ್ತದ ಕೃಷಿ ಮಾಡುತ್ತಿದ್ದಾರೆ. ಹಸಿರೆಲೆ ಗೊಬ್ಬರದ ಮೇಲೆ ದೇಶಿ ಭತ್ತದ ತಳಿಗಳ ಸಾಮ್ರಾಜ್ಯವನ್ನೇ ಸೃಷ್ಟಿಸಿದ್ದಾರೆ.