<p>ಬಸವಕಲ್ಯಾಣ: ಪುನರ್ ವೈಭವಂ ಫೌಂಡೇಶನ್ ಮತ್ತು ನಂದಿಕೂಗು ಅಭಿಯಾನ ವತಿಯಿಂದ ಬಸವಕಲ್ಯಾಣದಿಂದ ಕೂಡಲಸಂಗಮದವರೆಗೆ ನಡೆಯಲಿರುವ ಪಾದಯಾತ್ರೆಗೆ ನಗರದ ಬಸವಣ್ಣನವರ ಪರುಷಕಟ್ಟೆಯಲ್ಲಿ ಈಚೆಗೆ ಬಸವಲಿಂಗ ಪಟ್ಟದ್ದೇವರು ಚಾಲನೆ ನೀಡಿದರು.</p>.<p>ಬಳಿಕ ಅವರು ಮಾತನಾಡಿ, ‘ರೈತರ ಒಳಿತಿನ ಉದ್ದೇಶದ ಯಾತ್ರೆ ಇದಾಗಿದೆ. ಕೃಷಿಕರ ಪ್ರತಿ ಕಾರ್ಯಕ್ಕೂ ಕೈಜೋಡಿಸಬೇಕಾಗಿದೆ’ ಎಂದರು.</p>.<p>ಅಭಿಯಾನದ ಮಾರ್ಗದರ್ಶಕ ಸೋಮಲಿಂಗ ಪಾಟೀಲ ಮಾತನಾಡಿ, ‘ಮೂರು ವರ್ಷಗಳಿಂದ ಬೇರೆ ಬೇರೆ ಸ್ಥಳಗಳಲ್ಲಿ ಈ ಅಭಿಯಾನ ನಡೆದಿದೆ. ಕೃಷಿಕರು ಮತ್ತು ಜೋಡೆತ್ತಿನ ಮಹತ್ವ ತಿಳಿಸುವುದು ಇದರ ಉದ್ದೇಶವಾಗಿದೆ’ ಎಂದರು.</p>.<p>ಪುನರ್ ವೈಭವಂ ಫೌಂಡೇಶನ್ ಸಂಯೋಜಕ ಆಕಾಶ ಮೋಳ್ಕೆರಿ ಮಾತನಾಡಿ, ‘ತಾಲ್ಲೂಕಿನಲ್ಲಿ ಬಸವಜಯಂತಿ ದಿನದಿಂದ 11 ದಿನಗಳವರೆಗೆ ಈ ಅಭಿಯಾನ ನಡೆಸಿ ಅನೇಕ ಊರುಗಳಲ್ಲಿ ಜೋಡೆತ್ತಿನ ಪೂಜೆ ಕೈಗೊಳ್ಳಲಾಗಿದೆ’ ಎಂದರು.</p>.<p>ನಂದಿಸೇನೆ ಸಂಘಟನೆಯ ಬಸವರಾಜ ಬಿರಾದಾರ ಮಾತನಾಡಿ, ‘ಜೋಡೆತ್ತಿನ ಕೃಷಿ ಕೈಬಿಟ್ಟು ಯಾಂತ್ರಿಕವಾದ ಹಾಗೂ ರಾಸಾಯನಿಕಗಳ ಮೇಲೆ ಅವಲಂಬಿತವಾದ ವ್ಯವಸಾಯ ಕೈಗೊಳ್ಳುತ್ತಿರುವುದರಿಂದ ಪರಂಪರೆ ನಷ್ಟದಲ್ಲಿದೆ’ ಎಂದರು.</p>.<p>ಡಾ.ರುಚಿತಾ ಆಕಾಶ ಮೋಳ್ಕೆರಿ, ಶಿವಪುತ್ರ ಅವುಸೆ, ಆನಂದ ನಂದಿ, ಮಹೇಶ ಪಾಟೀಲ, ಪ್ರಭು ಮತ್ತಿತರರು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-33-1379385982</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಸವಕಲ್ಯಾಣ: ಪುನರ್ ವೈಭವಂ ಫೌಂಡೇಶನ್ ಮತ್ತು ನಂದಿಕೂಗು ಅಭಿಯಾನ ವತಿಯಿಂದ ಬಸವಕಲ್ಯಾಣದಿಂದ ಕೂಡಲಸಂಗಮದವರೆಗೆ ನಡೆಯಲಿರುವ ಪಾದಯಾತ್ರೆಗೆ ನಗರದ ಬಸವಣ್ಣನವರ ಪರುಷಕಟ್ಟೆಯಲ್ಲಿ ಈಚೆಗೆ ಬಸವಲಿಂಗ ಪಟ್ಟದ್ದೇವರು ಚಾಲನೆ ನೀಡಿದರು.</p>.<p>ಬಳಿಕ ಅವರು ಮಾತನಾಡಿ, ‘ರೈತರ ಒಳಿತಿನ ಉದ್ದೇಶದ ಯಾತ್ರೆ ಇದಾಗಿದೆ. ಕೃಷಿಕರ ಪ್ರತಿ ಕಾರ್ಯಕ್ಕೂ ಕೈಜೋಡಿಸಬೇಕಾಗಿದೆ’ ಎಂದರು.</p>.<p>ಅಭಿಯಾನದ ಮಾರ್ಗದರ್ಶಕ ಸೋಮಲಿಂಗ ಪಾಟೀಲ ಮಾತನಾಡಿ, ‘ಮೂರು ವರ್ಷಗಳಿಂದ ಬೇರೆ ಬೇರೆ ಸ್ಥಳಗಳಲ್ಲಿ ಈ ಅಭಿಯಾನ ನಡೆದಿದೆ. ಕೃಷಿಕರು ಮತ್ತು ಜೋಡೆತ್ತಿನ ಮಹತ್ವ ತಿಳಿಸುವುದು ಇದರ ಉದ್ದೇಶವಾಗಿದೆ’ ಎಂದರು.</p>.<p>ಪುನರ್ ವೈಭವಂ ಫೌಂಡೇಶನ್ ಸಂಯೋಜಕ ಆಕಾಶ ಮೋಳ್ಕೆರಿ ಮಾತನಾಡಿ, ‘ತಾಲ್ಲೂಕಿನಲ್ಲಿ ಬಸವಜಯಂತಿ ದಿನದಿಂದ 11 ದಿನಗಳವರೆಗೆ ಈ ಅಭಿಯಾನ ನಡೆಸಿ ಅನೇಕ ಊರುಗಳಲ್ಲಿ ಜೋಡೆತ್ತಿನ ಪೂಜೆ ಕೈಗೊಳ್ಳಲಾಗಿದೆ’ ಎಂದರು.</p>.<p>ನಂದಿಸೇನೆ ಸಂಘಟನೆಯ ಬಸವರಾಜ ಬಿರಾದಾರ ಮಾತನಾಡಿ, ‘ಜೋಡೆತ್ತಿನ ಕೃಷಿ ಕೈಬಿಟ್ಟು ಯಾಂತ್ರಿಕವಾದ ಹಾಗೂ ರಾಸಾಯನಿಕಗಳ ಮೇಲೆ ಅವಲಂಬಿತವಾದ ವ್ಯವಸಾಯ ಕೈಗೊಳ್ಳುತ್ತಿರುವುದರಿಂದ ಪರಂಪರೆ ನಷ್ಟದಲ್ಲಿದೆ’ ಎಂದರು.</p>.<p>ಡಾ.ರುಚಿತಾ ಆಕಾಶ ಮೋಳ್ಕೆರಿ, ಶಿವಪುತ್ರ ಅವುಸೆ, ಆನಂದ ನಂದಿ, ಮಹೇಶ ಪಾಟೀಲ, ಪ್ರಭು ಮತ್ತಿತರರು ಉಪಸ್ಥಿತರಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-33-1379385982</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>