<p>ಸಾಸಲು (ದೊಡ್ಡಬಳ್ಳಾಪುರ): ತಾಲ್ಲೂಕಿನ ಹಾಡೋನಹಳ್ಳಿಯ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಿಂದ ಕೊಟ್ಟಿಗೆಮಾಚೇನಹಳ್ಳಿ ಮತ್ತು ಹೊಸಹಳ್ಳಿ ಗ್ರಾಮದಲ್ಲಿ ಈರುಳ್ಳಿಯಲ್ಲಿ ಉತ್ತಮ ಬೀಜ ಇಳುವರಿಗೆ ಜೇನುನೊಣಗಳ ಪರಾಗ ಸ್ಪರ್ಶಕ್ರಿಯೆ ಪ್ರಾತ್ಯಕ್ಷಿಕೆ ಕ್ಷೇತ್ರೋತ್ಸವ ಐದು ರೈತರ ತಾಕಿನಲ್ಲಿ ಕೈಗೊಳ್ಳಲಾಗಿತ್ತು.</p>.<p>ಕೃಷಿ ವಿಜ್ಞಾನ ಕೇಂದ್ರದ ಜೇನು ಕೃಷಿ ತಜ್ಞ ಡಾ.ಈಶ್ವರಪ್ಪ ಮಾಹಿತಿ ನೀಡಿ, ಈರುಳ್ಳಿ ಬೆಳೆಯಲ್ಲಿ ಪರಾಗ ಸ್ಪರ್ಶ ಅವಶ್ಯಕತೆ ಇದೆ. ಜೇನುನೊಣ ಹೂವುಗಳಿಂದ ಹೂಗಳಿಗೆ ಪರಾಗ ಸಾಗಿಸಿ ಪರಿಣಾಮಕಾರಿಯಾಗಿ ಪರಾಗಸ್ಪರ್ಶ ನಡೆಸಿ ಪ್ರತಿ ಹೂವು ಗುಚ್ಛದಿಂದ ಹೆಚ್ಚಿನ ಬೀಜ ಉತ್ಪಾದನೆ ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ 4 ರಿಂದ 6 ತುಡುವೆ ಜೇನು ಪೆಟ್ಟಿಗೆಗಳನ್ನು ಒಂದು ಎಕರೆ ಈರುಳ್ಳಿ ಬೆಳೆ ಪ್ರದೇಶದಲ್ಲಿ ಶೇ 10ರ ಹೂವಿನ ಹಂತದಲ್ಲಿ ಅಳವಡಿಸಿ, ಯಾವುದೇ ಕೀಟನಾಶಕ ಬಳಸದೆ ಬೇವಿನ ಎಣ್ಣೆ ಸಿಂಪಡಣೆ ಮಾಡುವುದರಿಂದ ಒಂದು ಹೆಕ್ಟೇರಿಗೆ 450-500 ಕೆ.ಜಿ.ಬೀಜಗಳನ್ನು ರೈತರು ಪಡೆಯಲಿದ್ದಾರೆ ಎಂದರು.</p>.<p>ಪ್ರಾತ್ಯಕ್ಷಿಕೆಯಲ್ಲಿ ರೈತ ರಾಜೇಶ್ ಮಾತನಾಡಿದರು.</p>.<p>ವಿಜ್ಞಾನಿ ಡಾ.ಜಿ.ಕೆ.ನಿಂಗರಾಜು, ಡಾ.ವೈ.ಎಂ.ಗೋಪಾಲ್, ಡಾ.ಬಾಲಾಜಿನಾಯಕ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-15-779670969</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾಸಲು (ದೊಡ್ಡಬಳ್ಳಾಪುರ): ತಾಲ್ಲೂಕಿನ ಹಾಡೋನಹಳ್ಳಿಯ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಿಂದ ಕೊಟ್ಟಿಗೆಮಾಚೇನಹಳ್ಳಿ ಮತ್ತು ಹೊಸಹಳ್ಳಿ ಗ್ರಾಮದಲ್ಲಿ ಈರುಳ್ಳಿಯಲ್ಲಿ ಉತ್ತಮ ಬೀಜ ಇಳುವರಿಗೆ ಜೇನುನೊಣಗಳ ಪರಾಗ ಸ್ಪರ್ಶಕ್ರಿಯೆ ಪ್ರಾತ್ಯಕ್ಷಿಕೆ ಕ್ಷೇತ್ರೋತ್ಸವ ಐದು ರೈತರ ತಾಕಿನಲ್ಲಿ ಕೈಗೊಳ್ಳಲಾಗಿತ್ತು.</p>.<p>ಕೃಷಿ ವಿಜ್ಞಾನ ಕೇಂದ್ರದ ಜೇನು ಕೃಷಿ ತಜ್ಞ ಡಾ.ಈಶ್ವರಪ್ಪ ಮಾಹಿತಿ ನೀಡಿ, ಈರುಳ್ಳಿ ಬೆಳೆಯಲ್ಲಿ ಪರಾಗ ಸ್ಪರ್ಶ ಅವಶ್ಯಕತೆ ಇದೆ. ಜೇನುನೊಣ ಹೂವುಗಳಿಂದ ಹೂಗಳಿಗೆ ಪರಾಗ ಸಾಗಿಸಿ ಪರಿಣಾಮಕಾರಿಯಾಗಿ ಪರಾಗಸ್ಪರ್ಶ ನಡೆಸಿ ಪ್ರತಿ ಹೂವು ಗುಚ್ಛದಿಂದ ಹೆಚ್ಚಿನ ಬೀಜ ಉತ್ಪಾದನೆ ಸಾಧ್ಯವಾಗಿದೆ. ಈ ನಿಟ್ಟಿನಲ್ಲಿ 4 ರಿಂದ 6 ತುಡುವೆ ಜೇನು ಪೆಟ್ಟಿಗೆಗಳನ್ನು ಒಂದು ಎಕರೆ ಈರುಳ್ಳಿ ಬೆಳೆ ಪ್ರದೇಶದಲ್ಲಿ ಶೇ 10ರ ಹೂವಿನ ಹಂತದಲ್ಲಿ ಅಳವಡಿಸಿ, ಯಾವುದೇ ಕೀಟನಾಶಕ ಬಳಸದೆ ಬೇವಿನ ಎಣ್ಣೆ ಸಿಂಪಡಣೆ ಮಾಡುವುದರಿಂದ ಒಂದು ಹೆಕ್ಟೇರಿಗೆ 450-500 ಕೆ.ಜಿ.ಬೀಜಗಳನ್ನು ರೈತರು ಪಡೆಯಲಿದ್ದಾರೆ ಎಂದರು.</p>.<p>ಪ್ರಾತ್ಯಕ್ಷಿಕೆಯಲ್ಲಿ ರೈತ ರಾಜೇಶ್ ಮಾತನಾಡಿದರು.</p>.<p>ವಿಜ್ಞಾನಿ ಡಾ.ಜಿ.ಕೆ.ನಿಂಗರಾಜು, ಡಾ.ವೈ.ಎಂ.ಗೋಪಾಲ್, ಡಾ.ಬಾಲಾಜಿನಾಯಕ್ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260505-15-779670969</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>