ರೈತರ ಕಷ್ಟ ನಮಗೂ ಅರ್ಥವಾಗುತ್ತದೆ, ಆದರೆ ನಾವು ಅಸಹಾಯಕರಾಗಿದ್ದೇವೆ. ಮಾರುಕಟ್ಟೆಗೆ ಬಂದ ರೈತರ ಉತ್ಪನ್ನ ಗುಣಮಟ್ಟ ಸರಿಯಲ್ಲಿ. ಮಳೆಯಿಂದ ಹಾಳಾಗಿದೆ. ಕಾಳುಗಳು ತೇವಗೊಂಡು ತೂಕ ಹೆಚ್ಚಾಗಿ ತೂಗುತ್ತವೆ. ಇವುಗಳನ್ನು ಒಣಗಿಸಿ ಸಂಸ್ಕರಿಸಿದರೆ ಪ್ರತಿ ಕ್ವಿಂಟಲಗೆ 20 ಕೆ.ಜಿ ಖೋತಾ ಆಗುತ್ತಿದೆ. ಹೀಗಾಗಿ ಕನಿಷ್ಠ ದರ ಅನಿವಾರ್ಯವಾಗಿದೆ ಎಂದು ಚಿಂಚೋಳಿ ಎಪಿಎಂಸಿಯ ವರ್ತಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.