<p>ಬ್ಯಾಡಗಿ: ಅನ್ನದಾತರ ಜೀವನಾಡಿಯಾಗಿರುವ ಕೃಷಿ ಹೊಂಡಗಳನ್ನು ಪ್ರತಿಯೊಬ್ಬ ರೈತರು ನಿರ್ಮಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಹೇಳಿದರು</p>.<p>ತಾಲ್ಲೂಕಿನ ಚಿಕ್ಕಳ್ಳಿ ಗ್ರಾಮದ ಇಮುಸಾಬ ಸೂಡಂಬಿ ಅವರ ಹೊಲದಲ್ಲಿ ಈಚೆಗೆ ಕೃಷಿ ಇಲಾಖೆ ಆಯೋಜಿಸಿದ್ದ ಕೃಷಿ ಹೊಂಡ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ನೀರು ಕೃಷಿ ಜೊತೆಗೆ ಪ್ರತಿಯೊಂದು ಜೀವಿಗೂ ಅಗತ್ಯವಿದೆ. ಬೆಳೆಗಳಿಗೆ ಶುದ್ಧವಾದ ನೀರು ಪೂರೈಸುವಲ್ಲಿ ಕೃಷಿ ಹೊಂಡದ ಪಾತ್ರ ದೊಡ್ಡದು. ಮಳೆಗಾಲದಲ್ಲಿ ಕೃಷಿ ಹೊಂಡದಲ್ಲಿ ಸಂಗ್ರಹಿಸಿದ ಬೇಸಿಗೆ ಕಾಲದ 2-3 ತಿಂಗಳ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಕಾರಣ ಸರ್ಕಾರದ ಅನುದಾನ ಕಡಿಮೆಯಾಗಿದ್ದರೂ ಚಿಂತಿಸದೆ ಕೃಷಿ ಹೊಂಡ ನಿರ್ಮಿಸಿಕೊಂಡು ಉತ್ತಮ ಆದಾಯ ಪಡೆಯಬಹುದು ಎಂದರು.</p>.<p>ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಮಾತನಾಡಿ, ನೂರಾರು ಸಮಸ್ಯೆಗಳ ಪರಿಹಾರಕ್ಕೆ ನೀರು ಪರಿಹಾರವಾಗಬಲ್ಲದು. ಅದಕ್ಕಾಗಿ ಹೊಲಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಅದರ ಸದುಪಯೋಗ ಪಡೆದುಕೊಂಡು ಉತ್ತಮ ಬೆಳೆ ಬೆಲೆಯಲು ಮುಂದಾಗಬೇಕೆಂದು ಸಲಹೆ ನೀಡಿದರು.</p>.<p>ಈ ವೇಳೆ ನಾಗರಾಜ ಬನ್ನಿಹಟ್ಟಿ ಮೃತ್ಯುಂಜಯ ಕುಳೇನೂರ, ಕೃಷಿಕರಾದ ಮಲ್ಲಿಕಾರ್ಜುನ ಕಚವಿ, ರುದ್ರಗೌಡ ಕಾಡನಗೌಡ್ರ, ಷಣ್ಮುಖಪ್ಪ ಮುಳತಳ್ಳಿ, ಮಂಜುನಾಥ ಲಕ್ಕಮ್ಮನವರ, ಗಂಗಯ್ಯ ಕುಲಕರ್ಣಿ ಇದ್ದರು.</p>.<p>ಚಿಕ್ಕಬಾಸುರ, ಬೀರನಕೊಪ್ಪ, ಮತ್ತೂರ, ಸಿದ್ದಾಪುರ, ದಾಸನಕೊಪ್ಪ, ಸೈಡಂಬಿ, ಹಿರೇಹಳ್ಳಿ, ನೆಲ್ಲಿಕೊಪ್ಪ ಮುಂತಾದ ಗ್ರಾಮಗಳಿಂದ ಆಗಮಿಸಿದ್ದ ರೈತರು ಕೃಷಿ ಹೊಂಡ ವೀಕ್ಷಿಸಿ ಸಂತಸಗೊಂಡರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-22-396712065</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬ್ಯಾಡಗಿ: ಅನ್ನದಾತರ ಜೀವನಾಡಿಯಾಗಿರುವ ಕೃಷಿ ಹೊಂಡಗಳನ್ನು ಪ್ರತಿಯೊಬ್ಬ ರೈತರು ನಿರ್ಮಿಸಿಕೊಳ್ಳಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಮಲ್ಲಿಕಾರ್ಜುನ ಹೇಳಿದರು</p>.<p>ತಾಲ್ಲೂಕಿನ ಚಿಕ್ಕಳ್ಳಿ ಗ್ರಾಮದ ಇಮುಸಾಬ ಸೂಡಂಬಿ ಅವರ ಹೊಲದಲ್ಲಿ ಈಚೆಗೆ ಕೃಷಿ ಇಲಾಖೆ ಆಯೋಜಿಸಿದ್ದ ಕೃಷಿ ಹೊಂಡ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ನೀರು ಕೃಷಿ ಜೊತೆಗೆ ಪ್ರತಿಯೊಂದು ಜೀವಿಗೂ ಅಗತ್ಯವಿದೆ. ಬೆಳೆಗಳಿಗೆ ಶುದ್ಧವಾದ ನೀರು ಪೂರೈಸುವಲ್ಲಿ ಕೃಷಿ ಹೊಂಡದ ಪಾತ್ರ ದೊಡ್ಡದು. ಮಳೆಗಾಲದಲ್ಲಿ ಕೃಷಿ ಹೊಂಡದಲ್ಲಿ ಸಂಗ್ರಹಿಸಿದ ಬೇಸಿಗೆ ಕಾಲದ 2-3 ತಿಂಗಳ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು. ಕಾರಣ ಸರ್ಕಾರದ ಅನುದಾನ ಕಡಿಮೆಯಾಗಿದ್ದರೂ ಚಿಂತಿಸದೆ ಕೃಷಿ ಹೊಂಡ ನಿರ್ಮಿಸಿಕೊಂಡು ಉತ್ತಮ ಆದಾಯ ಪಡೆಯಬಹುದು ಎಂದರು.</p>.<p>ಸಹಾಯಕ ಕೃಷಿ ನಿರ್ದೇಶಕ ಗಣೇಶ ಕಮ್ಮಾರ ಮಾತನಾಡಿ, ನೂರಾರು ಸಮಸ್ಯೆಗಳ ಪರಿಹಾರಕ್ಕೆ ನೀರು ಪರಿಹಾರವಾಗಬಲ್ಲದು. ಅದಕ್ಕಾಗಿ ಹೊಲಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಅದರ ಸದುಪಯೋಗ ಪಡೆದುಕೊಂಡು ಉತ್ತಮ ಬೆಳೆ ಬೆಲೆಯಲು ಮುಂದಾಗಬೇಕೆಂದು ಸಲಹೆ ನೀಡಿದರು.</p>.<p>ಈ ವೇಳೆ ನಾಗರಾಜ ಬನ್ನಿಹಟ್ಟಿ ಮೃತ್ಯುಂಜಯ ಕುಳೇನೂರ, ಕೃಷಿಕರಾದ ಮಲ್ಲಿಕಾರ್ಜುನ ಕಚವಿ, ರುದ್ರಗೌಡ ಕಾಡನಗೌಡ್ರ, ಷಣ್ಮುಖಪ್ಪ ಮುಳತಳ್ಳಿ, ಮಂಜುನಾಥ ಲಕ್ಕಮ್ಮನವರ, ಗಂಗಯ್ಯ ಕುಲಕರ್ಣಿ ಇದ್ದರು.</p>.<p>ಚಿಕ್ಕಬಾಸುರ, ಬೀರನಕೊಪ್ಪ, ಮತ್ತೂರ, ಸಿದ್ದಾಪುರ, ದಾಸನಕೊಪ್ಪ, ಸೈಡಂಬಿ, ಹಿರೇಹಳ್ಳಿ, ನೆಲ್ಲಿಕೊಪ್ಪ ಮುಂತಾದ ಗ್ರಾಮಗಳಿಂದ ಆಗಮಿಸಿದ್ದ ರೈತರು ಕೃಷಿ ಹೊಂಡ ವೀಕ್ಷಿಸಿ ಸಂತಸಗೊಂಡರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260330-22-396712065</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>