‘ಪ್ರಸ್ತುತ ದಿನಗಳಲ್ಲಿ ಬಹುತೇಕ ಯುವಕರು ಪದವಿ ಮುಗಿಸಿಕೊಂಡು ನಗರಗಳಿಗೆ ಕೆಲಸ ಅರಸಿಕೊಂಡು ಹೋಗುತ್ತಾರೆ. ಆದರೆ, ಪದವೀಧರ ಯುವಕ ರಫಿಕ್ ಸ್ವಂತ ಭೂಮಿ ಇಲ್ಲದಿದ್ದರೂ ಬೇರೆಯವರ ಭೂಮಿಯನ್ನು ವರ್ಷಕ್ಕೆ ಗುತ್ತಿಗೆ ಪಡೆದುಕೊಂಡು ಕೃಷಿಯಲ್ಲಿ ತೊಡಗಿಕೊಂಡು ಲಾಭ ಗಳಿಸುತ್ತಿದ್ದಾರೆ. ಇವರು ನಿರುದ್ಯೋಗಿ ಯುವಕರಿಗೆ ಮಾದರಿಯಾಗಿದ್ದಾರೆ’ ಎಂದು ಸಿಂದಬಂದಗಿಯ ಹಿರಿಯರಾದ ಬಸವಣಪ್ಪ ಹೇಳುತ್ತಾರೆ.