ಬೀಜ,ಗೊಬ್ಬರ,ಕೂಲಿ ಸೇರಿ ಪ್ರತಿ ಎಕರೆಗೆ ₹25 ಸಾವಿರ ಖರ್ಚಾಗಿದೆ. ಈರುಳ್ಳಿಗೆ ಮಾರುಕಟ್ಟೆಯಲ್ಲಿ ಕೆ.ಜಿಗೆ ₹60 ದರ ಇದ್ದರೂ, ತೇವಾಂಶ ಹೆಚ್ಚಳದಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ರೈತ ಅಬ್ದುಲ್ಅಜೀಜ ಬಿ
ತಾಂಬೋಟಿ, ಸಿದ್ದಪ್ಪ ಮಠದ, ಮುಸ್ತಿಸಾಬ್ ಹಳ್ಳಿಕೇರಿ ಹೇಳಿದರು. ಸರ್ಕಾರ ಈರುಳ್ಳಿ ಬೆಳೆ ಹಾನಿಯಾದ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರದಂತೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.