‘ದೇವೇಂದ್ರಪ್ಪ ಅವರು ಎಷ್ಟು ತಳಿ ಬೆಳೆಯುತ್ತಾರೆ ? ಸಾವಯವದಲ್ಲೇ ಹೇಗೆ ಬೆಳೆಯುತ್ತಾರೆ ? ಮಾರುಕಟ್ಟೆ ಹೇಗೆ? ಇಳುವರಿ ಬರುತ್ತದಾ ? ಅವರಿಗೆ ಕೆಲಸಗಾರರ ಸಮಸ್ಯೆ ಇಲ್ಲವಾ ?– ‘ಅನ್ನದ ಬಟ್ಟಲು’ ಸರಣಿಯ ಕಳೆದ ವಾರದ ‘ಅಜೋಲಾ, ಭತ್ತದ ಗದ್ದೆಗಳ ಕವಚ’ ಲೇಖನ ಓದಿದವರು ಕೇಳಿದ ಕುತೂಹಲದ ಪ್ರಶ್ನೆಗಳಿವು. ಈ ಲೇಖನದಲ್ಲಿ ಇಂಥ ಪ್ರಶ್ನೆಗಳಿಗೆ ಉತ್ತರಿಸುವ ಜೊತೆಗೆ, ದೇವೇಂದ್ರಪ್ಪ ಅವರು ಸೃಷ್ಟಿಸಿರುವ ‘ದೇಸಿ ಭತ್ತದ ತಳಿ ಲೋಕ’ದ ಕಥೆಯೂ ಇದೆ.