ಕಣದ ಕಲ್ಪನೆಯೇ ಚೆಂದ: ಮಳೆಗಾಲ ಮುಗಿವ ವೇಳೆಗೆ ರಾಗಿ ಕೊಯಿಲಿಗೆ ಬರುತ್ತದೆ. ಕತ್ತರಿಸಿದ ರಾಗಿ ಪೈರನ್ನು ಒಣಗಿಸಿ ಬಣವೆ ಹಾಕಲಾಗುತ್ತದೆ. ಇಪ್ಪತ್ತು ಅಡಿ ಸುತ್ತಳತೆಯ ಮಧ್ಯದಲ್ಲಿ ಮೇಟಿ ನಿಲ್ಲಿಸಿ, ಸಂಜೆ ನೀರು ಹಾಕಿ, ಬೆಳಿಗ್ಗೆಯೇ ದನ ಕರುಗಳಿಂದ ತುಳಿಸುವ ಮೂಲಕ ನೆಲವನ್ನು ಗಟ್ಟಿ ಮಾಡಿ ಕಣ ಭದ್ರ ಮಾಡಲಾಗುತ್ತದೆ.