ತೊಗರಿಗೆ ಹಲವೂ ವಿವಿಧ ರೀತಿಯ ಪೋಷಕಾಂಶಗಳನ್ನು ಹಾಕಿದ್ದರೂ ತೊಗರಿ ಬೆಳೆ ಕುಂಠಿತ ಕಂಡುಬಂದ ಕಾರಣ ರೈತ ಮನ್ನಥ, ಕಮಲನಗರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸುನೀಲ ಪಿ.ಬಿರಾದಾರ ಅವರನ್ನು ಸಂಪರ್ಕಿಸಿದರು. ಕೃಷಿ ಅಧಿಕಾರಿ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ, ತೊಗರಿ ಬೆಳೆಗೆ ಗೊಡ್ಡು ರೋಗ ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ. ನಂತರ ಜನವಾಡ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಹಾಗೂ ಹಿರಿಯ ವಿಜ್ಞಾನಿ ಡಾ.ಸುನೀಲಕುಮಾರ ಎನ್.ಎಂ ಅವರ ಗಮನಕ್ಕೆ ತಂದು ರೈತ ಮನ್ಮಥ ಅವರ ಮನವೊಲಿಸಿ ಬೆಳೆ ನಾಶ ಮಾಡಲು ಸಲಹೆ ನೀಡಿದ್ದಾರೆ.