ರೋಣದ ರೈತ ತೋಟಪ್ಪ ಅಂದಾನಪ್ಪ ತೋಟಗುಂಟಿ ಎಂಬುವವರು ತಮ್ಮ ಹೊಲದಲ್ಲಿ ಬೆಳೆದ ಸುಮಾರು 6 ಟನ್ ನಾಮಧಾರಿ ತಳಿಯ ಕಲ್ಲಂಗಡಿ ಹಣ್ಣನ್ನು ಮಾರಾಟ ಮಾಡುವುದಕ್ಕಾಗಿ ನವನಗರ ಎಪಿಎಂಸಿಗೆ ಟ್ರಾಕ್ಟರ್ ಮೂಲಕ ಗುರುವಾರ ತಂದಿದ್ದರು. ಆದರೆ, ದಲ್ಲಾಳಿಗಳು ಬೇಕಾಬಿಟ್ಟಿ ದರಕ್ಕೆ ಹಣ್ಣನ್ನು ಕೇಳಿದ್ದರಿಂದ ಬೇಸರಗೊಂಡ ಅವರು, ಹಣ್ಣನ್ನು ಮಾರಾಟ ಮಾಡದೇ ರಾಣಿ ಚನ್ನಮ್ಮ ವೃತ್ತಕ್ಕೆ ತಂದು ರಸ್ತೆ ಮೇಲೆ ಸುರಿವಿದರು.