<p>ಮಲೆನಾಡು ಒಂದು ಕಾಲದಲ್ಲಿ ಜೇನು ಸಂಸಾರಗಳ ಆವಾಸ ಸ್ಥಾನ. ಕಪ್ಪು ತುಡುವೆ ಸಹಜ ಕಾಡುಗಳಲ್ಲಿ ವ್ಯಾಪಕವಾಗಿದ್ದವು. ಮರದ ಪೊಟರೆಗಳಲ್ಲಿ , ವರಲೆ ಹುತ್ತಗಳಲ್ಲಿ ಸಹಜವಾಗಿ ನೆಲಸಿ ತುಪ್ಪ ಮಾಡಿ ಸಂಸಾರ ಸಾಗಿಸುತ್ತಿದ್ದವು. ಜೇನು ಹಿಡಿಯುವ ಹವ್ಯಾಸಿಗಳು ಜನವರಿಯಿಂದ ಮೇ ತಿಂಗಳವರೆಗೆ ಕಾಡು ಸುತ್ತಿ ತುಪ್ಪ ಸಂಗ್ರಹಿಸಿ ಮನೆ ಬಳಕೆಗೆ ಹಾಗೂ ವ್ಯಾಪಾರಕ್ಕೆ ಬಳಸುತ್ತಿದ್ದರು. ಹಳ್ಳಿಗಳಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಪೆಟ್ಟಿಗೆಯಲ್ಲಿ ಮನೆಯ ಹಿತ್ತಲಿನಲ್ಲಿ ವ್ಯವಸ್ಥಿತವಾಗಿ ಸಾಕಾಣಿಕೆ ಮಾಡಿ ತುಪ್ಪ ಸಂಗ್ರಹಿಸುತ್ತಿದ್ದರು.</p><p>ಇಪ್ಪತ್ತರ ದಶಕದ ಆರಂಭದಲ್ಲಿ ಕಪ್ಪು ತುಡುವೆ ಜೇನಿಗೆ ವೈರಸ್ ಖಾಯಿಲೆ ವ್ಯಾಪಿಸಿತು. ಆ ನಂತರ ಕಪ್ಪು ತುಡುವೆ ಜೇನು ಗಣನೀಯವಾಗಿ ಇಳಿಕೆ ಕಂಡು ಜೇನು ಉದ್ಯಮ ಆತಂಕದಲ್ಲಿ ಮುಳುಗಿತು. ಆಗ ಕೇರಳದಿಂದ ಅರಿಶಿನ ತುಡುವೆ ಜೇನು ಮಲೆನಾಡು ಪ್ರವೇಶಿಸಿತು. ಸಾಮಾನ್ಯವಾಗಿ ಬಯಲು ಸೀಮೆಯಲ್ಲಿ ಮಾತ್ರ ಸಿಗುತ್ತಿದ್ದ ಅರಿಶಿನ ಬಣ್ಣದ ಈ ತುಡುವೆ ಜೇನು ವೈರಸ್ ಖಾಯಿಲೆಯಿಂದ ಬಾಧಿತವಾಗಿರಲಿಲ್ಲ, ಶಿರಸಿಯ ಧರ್ಮೇಂದ್ರ ಹೆಗಡೆ, ಸಾಗರದ ಪರ್ವ ಮಲೆನಾಡು, ನಾಗೇಂದ್ರ ಸಾಗರ್ ಮುಂತಾದ ಜೇನಿನ ಆಸಕ್ತರು ಮಲೆನಾಡಿಗೆ ಕೇರಳದಿಂದ ಅರಿಶಿನ ತುಡುವೆ ಕುಟುಂಬ ತಂದು ಜೇನು ಸಾಕಾಣಿಕೆಗೆ ಮಹತ್ವ ಬರುವಂತೆ ಮಾಡಿದ್ದು ಈಗ ಇತಿಹಾಸ.</p><p>ಅಲ್ಲಿಯವರೆಗೆ ಹವ್ಯಾಸಕ್ಕಾಗಿ ಪ್ರಚಾರವಾಗಿದ್ದ ಜೇನು ಸಾಕಾಣಿಕೆ 2000 ಇಸವಿಯ ನಂತರ ಮಲೆನಾಡಿನಲ್ಲಿ ಹಲವಾರು ಕೃಷಿಕರಿಗೆ ಉಪ ಆದಾಯವಾಗಿ ಪರಿವರ್ತನೆಗೊಂಡಿತು. ಜೇನು ತುಪ್ಪಕ್ಕಿರುವ ವ್ಯಾಪಕ ಬೇಡಿಕೆ, ಶುದ್ಧ ಜೇನು ತುಪ್ಪಕ್ಕಿರುವ ಮೌಲ್ಯ ಜೇನು ಕೃಷಿ ಮಲೆನಾಡಿನಲ್ಲಿ ಮರುಹುಟ್ಟು ಪಡೆದು ಆರ್ಥಿಕ ಮೂಲದ ಕೃಷಿಯಾಗಿ ಪರಿವರ್ತನೆ ಗೊಂಡಿದೆ.</p><p><strong>ಜೇನುಗಳ ಹಲವು ವಿಧ</strong></p><p>ಭೂಮಿಯ ಮೇಲೆ ಸಹಸ್ರಾರು ಕೀಟಗಳಿವೆ, ಅವುಗಳಲ್ಲಿ ನಿಸರಿ ಹಾಗೂ ಜೇನು ಮಾತ್ರ ಮನುಷ್ಯರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಹೆಜ್ಜೇನು, ತುಡುವೆ, ನಿಸರಿ ಹಾಗೂ ಕೋಲ್ಜೇನು ಎಂಬ ನಾಲ್ಕು ಬಗೆಯ ಕೀಟ ತುಪ್ಪ ಸಂಗ್ರಹಣೆ ಮಾಡುವ ಜೀವನ ಕ್ರಮ ಇರುವ ಕಾರಣಕ್ಕೆ ಮನುಷ್ಯ ಅದರ ಉಪಯೋಗ ಪಡೆಯುತ್ತಿದ್ದಾನೆ. ಹೆಜ್ಜೇನು ಹಾಗೂ ಕೋಲ್ಜೇನು ಸಾಕಾಣಿಕೆಗೆ ಯೋಗ್ಯವಿಲ್ಲ , ಹೆಜ್ಜೇನು ಹಾಗೂ ಮೆಲ್ಲಿಪಿರಾ ಒಂದೇ ಗಾತ್ರದ ಜೇನು ಹುಳಗಳು, ವಿದೇಶದಿಂದ ಆಗಮಿಸಿರುವ ಈ ತಳಿ ಸಾಕಲು ಯೋಗ್ಯ, ಉತ್ತರ ಭಾರತದ ಸೂರ್ಯಕಾಂತಿ ಹೊಲಗಳಲ್ಲಿ ಇದನ್ನು ಪೆಟ್ಟಿಗೆಯಲ್ಲಿಟ್ಟು ದೊಡ್ಡ ಮಟ್ಟದ ಉದ್ಯಮ ಮಾಡುತ್ತಾರೆ. ಇವುಗಳ ಪರಾಗಸ್ಪರ್ಶ ಕ್ರಿಯೆಯಿಂದ ಸೂರ್ಯಕಾಂತಿ ಹಾಗೂ ಇನ್ನಿತರ ಬಯಲು ಪ್ರದೇಶದ ಬೆಳಗಳು ಹೆಚ್ಚುವ ಕಾರಣ ಹೊಲಗಳಲ್ಲಿ ನೂರಾರು ಮೆಲಿಫಿರಾ ತಳಿಯ ಸಾಕಾಣಿಕೆ ಮಾಡುತ್ತಾರೆ.</p><p><strong>ಜೇನು ಕೃಷಿ</strong></p><p>ಕರ್ನಾಟಕ ರಾಜ್ಯದಾದ್ಯಂತ ಸಹಸ್ರಾರು ಕೃಷಿಕರು ಇತ್ತೀಚಿನ ದಿನಗಳಲ್ಲಿ ಜೇನುಪೆಟ್ಟಿಗೆ ಇಟ್ಟು ಉಪ ಆದಾಯವನ್ನು ಪಡೆಯುತ್ತಿದ್ದಾರೆ. ಅಂತಹವರಲ್ಲಿ ಸಾಗರದ ಸಮೀಪದ ಪರ್ವ ಮಲ್ನಾಡ್ ಹಾಗೂ ರಾಜೇಂದ್ರ ಹಿಂಡೂಮನೆ ಕೂಡ ಸೇರಿದ್ದಾರೆ. ಇವರು ನೂರಾರು ಪೆಟ್ಟಿಗೆಗಳನ್ನಿಟ್ಟು ಉತ್ತಮ ಆದಾಯ ಗಳಿಸುತ್ತಿದ್ದಾರೆ. <br>ಪರ್ವ ಮಲ್ನಾಡ್ ಮೂಲತಃ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದರು. ಏಳು ವರ್ಷದ ಹಿಂದೆ ಹವ್ಯಾಸಕ್ಕಾಗಿ ಆರಂಭಿಸಿದ್ದ ಜೇನು ಕೃಷಿ, ಪ್ರಸ್ತುತ ಸಾಗರ ತಾಲ್ಲೂಕಿನ 13 ಹಳ್ಳಿಗಳಲ್ಲಿ 130 ಪೆಟ್ಟಿಗೆ ಇಟ್ಟು ಈ ವರ್ಷ 780 ಕೆಜಿ ಜೇನು ಸಂಗ್ರಹಿಸಿದ್ದಾರೆ.</p>.<p>ಸಾಗರ ತಾಲ್ಲೂಕಿನ ಹಿಂಡೂಮನೆ ಫಾರ್ಮ ಹಣ್ಣಿನ ಕೃಷಿಯಲ್ಲಿ ಪ್ರಖ್ಯಾತ. ಸುಮಾರು ಒಂದೂವರೆ ಸಾವಿರ ಜಾತಿಯ ಹಣ್ಣಿನ ಮರಗಳನ್ನು ನೆಟ್ಟು ಬೆಳೆಸಿರುವ ರಾಜೇಂದ್ರ ಹಿಂಡೂಮನೆ 30 ಜೇನು ಪೆಟ್ಟಿಗೆಯನ್ನಿಟ್ಟು ಈ ವರ್ಷ 150 ಕೆಜಿ ಜೇನು ಸಂಗ್ರಹಿಸಿದ್ದಾರೆ. ಜೇನು ತುಪ್ಪದ ಜತೆಗೆ ಪರಾಗಸ್ಪರ್ಶ ಕ್ರಿಯೆಯಲ್ಲಿ ಹೆಚ್ಚಿನ ಆದಾಯ ಇದೆ ಎನ್ನುತ್ತಾರೆ. ಇವರು ಜೇನು ರೊಟ್ಟುಗಳನ್ನು ತುಪ್ಪದ ಸಮೇತ ಮಾರಾಟ ಮಾಡುವ ಹೊಸ ವಿಧಾನವನ್ನೂ ಪರಿಚಯಿಸಿದ್ದಾರೆ.</p>.<div><blockquote>ಉತ್ತಮ ಮಳೆಗಾಲ, ಚಳಿಗಾಲ ಆಗಿರೋದ್ರಿಂದ ಜತೆಗೆ ಬೇಸಿಗೆಯೂ ಉತ್ತಮವಾಗಿ ಇರೋದ್ರಿಂದ ಬಹುತೇಕ ಎಲ್ಲಾ ರೀತಿಯ ಗಿಡಮರಗಳು ಹೂವಿನಿಂದ ಮೈದುಂಬಿಕೊಂಡಿವೆ ಹೀಗಾಗಿ ಈ ವರ್ಷ ಉತ್ತಮ ಇಳುವರಿ ಇದೆ.</blockquote><span class="attribution">ಪರ್ವ ಮಲ್ನಾಡ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಲೆನಾಡು ಒಂದು ಕಾಲದಲ್ಲಿ ಜೇನು ಸಂಸಾರಗಳ ಆವಾಸ ಸ್ಥಾನ. ಕಪ್ಪು ತುಡುವೆ ಸಹಜ ಕಾಡುಗಳಲ್ಲಿ ವ್ಯಾಪಕವಾಗಿದ್ದವು. ಮರದ ಪೊಟರೆಗಳಲ್ಲಿ , ವರಲೆ ಹುತ್ತಗಳಲ್ಲಿ ಸಹಜವಾಗಿ ನೆಲಸಿ ತುಪ್ಪ ಮಾಡಿ ಸಂಸಾರ ಸಾಗಿಸುತ್ತಿದ್ದವು. ಜೇನು ಹಿಡಿಯುವ ಹವ್ಯಾಸಿಗಳು ಜನವರಿಯಿಂದ ಮೇ ತಿಂಗಳವರೆಗೆ ಕಾಡು ಸುತ್ತಿ ತುಪ್ಪ ಸಂಗ್ರಹಿಸಿ ಮನೆ ಬಳಕೆಗೆ ಹಾಗೂ ವ್ಯಾಪಾರಕ್ಕೆ ಬಳಸುತ್ತಿದ್ದರು. ಹಳ್ಳಿಗಳಲ್ಲಿ ಅಲ್ಲೊಬ್ಬರು ಇಲ್ಲೊಬ್ಬರು ಪೆಟ್ಟಿಗೆಯಲ್ಲಿ ಮನೆಯ ಹಿತ್ತಲಿನಲ್ಲಿ ವ್ಯವಸ್ಥಿತವಾಗಿ ಸಾಕಾಣಿಕೆ ಮಾಡಿ ತುಪ್ಪ ಸಂಗ್ರಹಿಸುತ್ತಿದ್ದರು.</p><p>ಇಪ್ಪತ್ತರ ದಶಕದ ಆರಂಭದಲ್ಲಿ ಕಪ್ಪು ತುಡುವೆ ಜೇನಿಗೆ ವೈರಸ್ ಖಾಯಿಲೆ ವ್ಯಾಪಿಸಿತು. ಆ ನಂತರ ಕಪ್ಪು ತುಡುವೆ ಜೇನು ಗಣನೀಯವಾಗಿ ಇಳಿಕೆ ಕಂಡು ಜೇನು ಉದ್ಯಮ ಆತಂಕದಲ್ಲಿ ಮುಳುಗಿತು. ಆಗ ಕೇರಳದಿಂದ ಅರಿಶಿನ ತುಡುವೆ ಜೇನು ಮಲೆನಾಡು ಪ್ರವೇಶಿಸಿತು. ಸಾಮಾನ್ಯವಾಗಿ ಬಯಲು ಸೀಮೆಯಲ್ಲಿ ಮಾತ್ರ ಸಿಗುತ್ತಿದ್ದ ಅರಿಶಿನ ಬಣ್ಣದ ಈ ತುಡುವೆ ಜೇನು ವೈರಸ್ ಖಾಯಿಲೆಯಿಂದ ಬಾಧಿತವಾಗಿರಲಿಲ್ಲ, ಶಿರಸಿಯ ಧರ್ಮೇಂದ್ರ ಹೆಗಡೆ, ಸಾಗರದ ಪರ್ವ ಮಲೆನಾಡು, ನಾಗೇಂದ್ರ ಸಾಗರ್ ಮುಂತಾದ ಜೇನಿನ ಆಸಕ್ತರು ಮಲೆನಾಡಿಗೆ ಕೇರಳದಿಂದ ಅರಿಶಿನ ತುಡುವೆ ಕುಟುಂಬ ತಂದು ಜೇನು ಸಾಕಾಣಿಕೆಗೆ ಮಹತ್ವ ಬರುವಂತೆ ಮಾಡಿದ್ದು ಈಗ ಇತಿಹಾಸ.</p><p>ಅಲ್ಲಿಯವರೆಗೆ ಹವ್ಯಾಸಕ್ಕಾಗಿ ಪ್ರಚಾರವಾಗಿದ್ದ ಜೇನು ಸಾಕಾಣಿಕೆ 2000 ಇಸವಿಯ ನಂತರ ಮಲೆನಾಡಿನಲ್ಲಿ ಹಲವಾರು ಕೃಷಿಕರಿಗೆ ಉಪ ಆದಾಯವಾಗಿ ಪರಿವರ್ತನೆಗೊಂಡಿತು. ಜೇನು ತುಪ್ಪಕ್ಕಿರುವ ವ್ಯಾಪಕ ಬೇಡಿಕೆ, ಶುದ್ಧ ಜೇನು ತುಪ್ಪಕ್ಕಿರುವ ಮೌಲ್ಯ ಜೇನು ಕೃಷಿ ಮಲೆನಾಡಿನಲ್ಲಿ ಮರುಹುಟ್ಟು ಪಡೆದು ಆರ್ಥಿಕ ಮೂಲದ ಕೃಷಿಯಾಗಿ ಪರಿವರ್ತನೆ ಗೊಂಡಿದೆ.</p><p><strong>ಜೇನುಗಳ ಹಲವು ವಿಧ</strong></p><p>ಭೂಮಿಯ ಮೇಲೆ ಸಹಸ್ರಾರು ಕೀಟಗಳಿವೆ, ಅವುಗಳಲ್ಲಿ ನಿಸರಿ ಹಾಗೂ ಜೇನು ಮಾತ್ರ ಮನುಷ್ಯರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಹೆಜ್ಜೇನು, ತುಡುವೆ, ನಿಸರಿ ಹಾಗೂ ಕೋಲ್ಜೇನು ಎಂಬ ನಾಲ್ಕು ಬಗೆಯ ಕೀಟ ತುಪ್ಪ ಸಂಗ್ರಹಣೆ ಮಾಡುವ ಜೀವನ ಕ್ರಮ ಇರುವ ಕಾರಣಕ್ಕೆ ಮನುಷ್ಯ ಅದರ ಉಪಯೋಗ ಪಡೆಯುತ್ತಿದ್ದಾನೆ. ಹೆಜ್ಜೇನು ಹಾಗೂ ಕೋಲ್ಜೇನು ಸಾಕಾಣಿಕೆಗೆ ಯೋಗ್ಯವಿಲ್ಲ , ಹೆಜ್ಜೇನು ಹಾಗೂ ಮೆಲ್ಲಿಪಿರಾ ಒಂದೇ ಗಾತ್ರದ ಜೇನು ಹುಳಗಳು, ವಿದೇಶದಿಂದ ಆಗಮಿಸಿರುವ ಈ ತಳಿ ಸಾಕಲು ಯೋಗ್ಯ, ಉತ್ತರ ಭಾರತದ ಸೂರ್ಯಕಾಂತಿ ಹೊಲಗಳಲ್ಲಿ ಇದನ್ನು ಪೆಟ್ಟಿಗೆಯಲ್ಲಿಟ್ಟು ದೊಡ್ಡ ಮಟ್ಟದ ಉದ್ಯಮ ಮಾಡುತ್ತಾರೆ. ಇವುಗಳ ಪರಾಗಸ್ಪರ್ಶ ಕ್ರಿಯೆಯಿಂದ ಸೂರ್ಯಕಾಂತಿ ಹಾಗೂ ಇನ್ನಿತರ ಬಯಲು ಪ್ರದೇಶದ ಬೆಳಗಳು ಹೆಚ್ಚುವ ಕಾರಣ ಹೊಲಗಳಲ್ಲಿ ನೂರಾರು ಮೆಲಿಫಿರಾ ತಳಿಯ ಸಾಕಾಣಿಕೆ ಮಾಡುತ್ತಾರೆ.</p><p><strong>ಜೇನು ಕೃಷಿ</strong></p><p>ಕರ್ನಾಟಕ ರಾಜ್ಯದಾದ್ಯಂತ ಸಹಸ್ರಾರು ಕೃಷಿಕರು ಇತ್ತೀಚಿನ ದಿನಗಳಲ್ಲಿ ಜೇನುಪೆಟ್ಟಿಗೆ ಇಟ್ಟು ಉಪ ಆದಾಯವನ್ನು ಪಡೆಯುತ್ತಿದ್ದಾರೆ. ಅಂತಹವರಲ್ಲಿ ಸಾಗರದ ಸಮೀಪದ ಪರ್ವ ಮಲ್ನಾಡ್ ಹಾಗೂ ರಾಜೇಂದ್ರ ಹಿಂಡೂಮನೆ ಕೂಡ ಸೇರಿದ್ದಾರೆ. ಇವರು ನೂರಾರು ಪೆಟ್ಟಿಗೆಗಳನ್ನಿಟ್ಟು ಉತ್ತಮ ಆದಾಯ ಗಳಿಸುತ್ತಿದ್ದಾರೆ. <br>ಪರ್ವ ಮಲ್ನಾಡ್ ಮೂಲತಃ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದರು. ಏಳು ವರ್ಷದ ಹಿಂದೆ ಹವ್ಯಾಸಕ್ಕಾಗಿ ಆರಂಭಿಸಿದ್ದ ಜೇನು ಕೃಷಿ, ಪ್ರಸ್ತುತ ಸಾಗರ ತಾಲ್ಲೂಕಿನ 13 ಹಳ್ಳಿಗಳಲ್ಲಿ 130 ಪೆಟ್ಟಿಗೆ ಇಟ್ಟು ಈ ವರ್ಷ 780 ಕೆಜಿ ಜೇನು ಸಂಗ್ರಹಿಸಿದ್ದಾರೆ.</p>.<p>ಸಾಗರ ತಾಲ್ಲೂಕಿನ ಹಿಂಡೂಮನೆ ಫಾರ್ಮ ಹಣ್ಣಿನ ಕೃಷಿಯಲ್ಲಿ ಪ್ರಖ್ಯಾತ. ಸುಮಾರು ಒಂದೂವರೆ ಸಾವಿರ ಜಾತಿಯ ಹಣ್ಣಿನ ಮರಗಳನ್ನು ನೆಟ್ಟು ಬೆಳೆಸಿರುವ ರಾಜೇಂದ್ರ ಹಿಂಡೂಮನೆ 30 ಜೇನು ಪೆಟ್ಟಿಗೆಯನ್ನಿಟ್ಟು ಈ ವರ್ಷ 150 ಕೆಜಿ ಜೇನು ಸಂಗ್ರಹಿಸಿದ್ದಾರೆ. ಜೇನು ತುಪ್ಪದ ಜತೆಗೆ ಪರಾಗಸ್ಪರ್ಶ ಕ್ರಿಯೆಯಲ್ಲಿ ಹೆಚ್ಚಿನ ಆದಾಯ ಇದೆ ಎನ್ನುತ್ತಾರೆ. ಇವರು ಜೇನು ರೊಟ್ಟುಗಳನ್ನು ತುಪ್ಪದ ಸಮೇತ ಮಾರಾಟ ಮಾಡುವ ಹೊಸ ವಿಧಾನವನ್ನೂ ಪರಿಚಯಿಸಿದ್ದಾರೆ.</p>.<div><blockquote>ಉತ್ತಮ ಮಳೆಗಾಲ, ಚಳಿಗಾಲ ಆಗಿರೋದ್ರಿಂದ ಜತೆಗೆ ಬೇಸಿಗೆಯೂ ಉತ್ತಮವಾಗಿ ಇರೋದ್ರಿಂದ ಬಹುತೇಕ ಎಲ್ಲಾ ರೀತಿಯ ಗಿಡಮರಗಳು ಹೂವಿನಿಂದ ಮೈದುಂಬಿಕೊಂಡಿವೆ ಹೀಗಾಗಿ ಈ ವರ್ಷ ಉತ್ತಮ ಇಳುವರಿ ಇದೆ.</blockquote><span class="attribution">ಪರ್ವ ಮಲ್ನಾಡ್</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>