ಕಳೆದ ತಿಂಗಳು ತಿಮ್ಮಪ್ಪ ಅವರು ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿದ್ದ ದೃಶ್ಯವನ್ನು ವಾಹಿನಿಯೊಂದು ಬಿತ್ತರಿಸಿತ್ತು. ಇದೇ ಚಿತ್ರವನ್ನು ಬಳಸಿಕೊಂಡು, ಬಿಜೆಪಿ ಕಾರ್ಯಕರ್ತರಾದ ಗಣೇಶ್ ಗಟ್ಟಿ ಹಾಗೂ ಚಂದ್ರಶೇಖರ್ ಎಂಬುವವರು ಫೇಸ್ಬುಕ್ ಹಾಗೂ ‘ಸಾಗರ ಸುತ್ತಮುತ್ತ’ ಎಂಬ ವಾಟ್ಸ್ ಆ್ಯಪ್ ಗ್ರೂಪ್ನಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.