‘ತೆಂಗಿನಕಾಯಿ ಮೂಲಕ ಕೊಬ್ಬರಿ ಎಣ್ಣೆ ತೆಗೆದು, ಹಲವು ರೀತಿಯ ಗಿಡಮೂಲಿಕೆ ಬಳಸಿ ನವರತ್ನ ತೈಲವನ್ನು ಸಿದ್ಧಪಡಿಸಿದ್ದೇವೆ. ನೈಸರ್ಗಿಕ ವಸ್ತುಗಳನ್ನು ಬಳಸಿದ ಹಲ್ಲಿನ ಪುಡಿಗೆ ಬಾರೀ ಬೇಡಿಕೆ ಇದೆ. ಬಾಳೆಯನ್ನೂ ಬೆಳೆದು ಮಾರಾಟ ಮಾಡುತ್ತಿದ್ದೇವೆ. ಇದರೊಂದಿಗೆ ಅಲಸಂದೆ, ಕುಂಬಳ, ಹೀರೆ, ಅವರೆ, ಸೋರೆಕಾಯಿಯಂತ ಹಲವು ಬಗೆಯ ತರಕಾರಿಗಳನ್ನು ಬೆಳೆಯುತ್ತಿದ್ದೇವೆ. ಇದರಿಂದಲೂ ಸಾಕಷ್ಟು ಲಾಭವಿದೆ. ವಿವಿಧ ಬಗೆಯ ತೋಟಗಾರಿಕಾ ಸಸಿಗಳನ್ನು ಸಿದ್ಧಪಡಿಸಿ ಮಾರಾಟ ಮಾಡಲಾಗುತ್ತಿದೆ’ ಎಂದು ತಮ್ಮ ಕೃಷಿಯನ್ನು ವಿವರಿಸಿದರು.