<p>ಹುಣಸೂರು:‘ರಾಜ್ಯದಾದ್ಯಂತ ಪರವಾನಗಿ ಭೂ ಮಾಪಕರು 3 ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಇದರಿಂದ ರೈತರು ಭೂ ದಾಖಲೆ ಸಕಾಲಕ್ಕೆ ಸಿಗದೆ ಸಮಸ್ಯೆ ಎದುರಿಸುವಂತಾಗಿದೆ. ಸರ್ಕಾರ ಭೂ ಮಾಪಕರ ಸಮಸ್ಯೆ ಪರಿಹರಿಸಬೇಕು’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಆಗ್ರಹಿಸಿದ್ದಾರೆ.</p>.<p>ರಾಜ್ಯದಲ್ಲಿ ಭೂ ದಾಖಲೆಗಳ ಪ್ರಕರಣ 3 ಲಕ್ಷ ಬಾಕಿ ಇದ್ದು, ಈ ಸಮಸ್ಯೆ ಪರಿಹರಿಸುವ ಉದ್ದೇಶದಿಂದ 1999 ರಲ್ಲಿ ಅಂದಿನ ಸರ್ಕಾರ ಖಾಸಗಿ ಕ್ಷೇತ್ರದ ಪರವಾನಗಿ ಹೊಂದಿರುವ ಭೂ ಮಾಪಕರನ್ನ್ನು ನಿಯೋಜಿಸಿತು. ಸ್ವಲ್ಪ ಸಮಸ್ಯೆ ಪರಿಹಾರವಾಗಿದ್ದರೂ , ಬಹಳಷ್ಟು ಪರಿಹಾರವಾಗದೆ ಉಳಿದಿದೆ. ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಪರವಾನಗಿ ಭೂಮಾಪಕರು 11 ಇ–ನಕ್ಷೆ, ತತ್ಕಾಲ್ ಪೋಡಿ, ಭೂಪರಿವರ್ತನೆ, ಇ–ಸ್ವತ್ತು ಸೇರಿದಂತೆ 19 ಭೂ ದಾಖಲೆ ಪಡೆಯಲು ಸಹಕರಿಸಿದ್ದಾರೆ. ಈ ಭೂ ಮಾಪಕರ ಕೆಲಸಕ್ಕೆ ಸಂಭಾವನೆ ಎಂದು ನಿಗದಿಗೊಳಿಸಿದ್ದು, 2016 ರಲ್ಲಿ ಸುಪ್ರಿಂ ಕೋರ್ಟ್ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನಿಯಮ ಜಾರಿಗೊಳಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದರೂ ಅನುಷ್ಠಾನವಾಗಿಲ್ಲ ಎಂದು ತಿಳಿಸಿದ್ದಾರೆ.</p>.<p>ಕಂದಾಯ ಸಚಿವ ಕೃಷ್ಣಭೈರೇಗೌಡರು ಪರವಾನಗಿ ಭೂಮಾಪಕರ ನೌಕರರ ಸಮಸ್ಯೆಗೆ ಅತಿ ಶ್ರೀಘ್ರದಲ್ಲಿ ಸ್ಪಂದಿಸಿ ಮೂರು ತಿಂಗಳಿಂದ ಪ್ರತಿಭಟನೆಯಲ್ಲಿ ನಿರತರಾಗಿರುವ ಸಿಬ್ಬಂದಿಗೆ ಪರಿಹಾರ ನೀಡಿ, ರೈತರಿಗೆ ಭೂ ದಾಖಲೆ ಸಿದ್ದಪಡಿಸಲು ಕ್ರಮವಹಿಸಬೇಕು ಎಂದು ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-38-1100013569</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಣಸೂರು:‘ರಾಜ್ಯದಾದ್ಯಂತ ಪರವಾನಗಿ ಭೂ ಮಾಪಕರು 3 ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಇದರಿಂದ ರೈತರು ಭೂ ದಾಖಲೆ ಸಕಾಲಕ್ಕೆ ಸಿಗದೆ ಸಮಸ್ಯೆ ಎದುರಿಸುವಂತಾಗಿದೆ. ಸರ್ಕಾರ ಭೂ ಮಾಪಕರ ಸಮಸ್ಯೆ ಪರಿಹರಿಸಬೇಕು’ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್ ಆಗ್ರಹಿಸಿದ್ದಾರೆ.</p>.<p>ರಾಜ್ಯದಲ್ಲಿ ಭೂ ದಾಖಲೆಗಳ ಪ್ರಕರಣ 3 ಲಕ್ಷ ಬಾಕಿ ಇದ್ದು, ಈ ಸಮಸ್ಯೆ ಪರಿಹರಿಸುವ ಉದ್ದೇಶದಿಂದ 1999 ರಲ್ಲಿ ಅಂದಿನ ಸರ್ಕಾರ ಖಾಸಗಿ ಕ್ಷೇತ್ರದ ಪರವಾನಗಿ ಹೊಂದಿರುವ ಭೂ ಮಾಪಕರನ್ನ್ನು ನಿಯೋಜಿಸಿತು. ಸ್ವಲ್ಪ ಸಮಸ್ಯೆ ಪರಿಹಾರವಾಗಿದ್ದರೂ , ಬಹಳಷ್ಟು ಪರಿಹಾರವಾಗದೆ ಉಳಿದಿದೆ. ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಪರವಾನಗಿ ಭೂಮಾಪಕರು 11 ಇ–ನಕ್ಷೆ, ತತ್ಕಾಲ್ ಪೋಡಿ, ಭೂಪರಿವರ್ತನೆ, ಇ–ಸ್ವತ್ತು ಸೇರಿದಂತೆ 19 ಭೂ ದಾಖಲೆ ಪಡೆಯಲು ಸಹಕರಿಸಿದ್ದಾರೆ. ಈ ಭೂ ಮಾಪಕರ ಕೆಲಸಕ್ಕೆ ಸಂಭಾವನೆ ಎಂದು ನಿಗದಿಗೊಳಿಸಿದ್ದು, 2016 ರಲ್ಲಿ ಸುಪ್ರಿಂ ಕೋರ್ಟ್ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ನಿಯಮ ಜಾರಿಗೊಳಿಸುವಂತೆ ಸರ್ಕಾರಕ್ಕೆ ಸೂಚಿಸಿದ್ದರೂ ಅನುಷ್ಠಾನವಾಗಿಲ್ಲ ಎಂದು ತಿಳಿಸಿದ್ದಾರೆ.</p>.<p>ಕಂದಾಯ ಸಚಿವ ಕೃಷ್ಣಭೈರೇಗೌಡರು ಪರವಾನಗಿ ಭೂಮಾಪಕರ ನೌಕರರ ಸಮಸ್ಯೆಗೆ ಅತಿ ಶ್ರೀಘ್ರದಲ್ಲಿ ಸ್ಪಂದಿಸಿ ಮೂರು ತಿಂಗಳಿಂದ ಪ್ರತಿಭಟನೆಯಲ್ಲಿ ನಿರತರಾಗಿರುವ ಸಿಬ್ಬಂದಿಗೆ ಪರಿಹಾರ ನೀಡಿ, ರೈತರಿಗೆ ಭೂ ದಾಖಲೆ ಸಿದ್ದಪಡಿಸಲು ಕ್ರಮವಹಿಸಬೇಕು ಎಂದು ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-38-1100013569</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>