ನಗರದ ಪ್ರೀತಿ ರಾಜ್ ’ಮಿಸೆಸ್ ಇಂಡಿಯಾ ಕಂಟ್ರಿ ವೈಡ್ ಇಂಪ್ಯಾಕ್ಟ್ ಅವಾರ್ಡ್‘ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ನವದೆಹಲಿಯ ರಷ್ಯನ್ ಫೆಡರೇಷನ್ ಎಂಬಸ್ಸಿಯಲ್ಲಿ ಎಸಿಎಸ್ ಮೀಡಿಯ ಕಾರ್ಪೊರೇಷನ್ ಈ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಿತ್ತು.
ಎಸಿಎಸ್ ಮೀಡಿಯಾ ಕಾರ್ಪೊರೇಷನ್ ಮ್ಯಾನೇಜಿಂಗ್ ಡೈರೆಕ್ಟರ್ ಅಭಿರಾಮ್ ಕುಲಶ್ರೇಷ್ಠ ಮತ್ತು ಬಾಲಿವುಡ್ ಹಿನ್ನೆಲೆ ಗಾಯಕ ಅಂಕಿತ್ ತಿವಾರಿ ಸಮ್ಮುಖದಲ್ಲಿ ಪ್ರೀತಿ ರಾಜ್ ಕಿರೀಟ್ ಮುಡಿಗೇರಿಸಿಕೊಂಡರು.
ಪ್ರೀತಿ ರಾಜ್ ಮೈಸೂರಿನ ಮಹಾರಾಣಿ ಸೈನ್ಸ್ ಕಾಲೇಜಿನಲ್ಲಿ ಓದಿದವರು. ಕ್ಯೂಬ್ಸ್ ಇಂಟಿರೀಯರ್ಸ್ನ ಮಾಲೀಕರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.