ADVERTISEMENT

ನೆಲೆಮಾವುಮಠದ ಚರಿತ್ರೆಗೊಂದು ಆಕರ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2021, 19:30 IST
Last Updated 27 ಫೆಬ್ರುವರಿ 2021, 19:30 IST
ನೆಲೆಮಾವುಮಠದ ಶ್ರೀಗುರುಪರಂಪರೆ
ನೆಲೆಮಾವುಮಠದ ಶ್ರೀಗುರುಪರಂಪರೆ   

ನೆಲೆಮಾವುಮಠದ ಶ್ರೀಗುರುಪರಂಪರೆ
ಲೇ:
ಗಣೇಶ ಭಟ್ಟ ಹೋಬಳಿ
ಪ್ರ: ಮಹಾಬಲೇಶ್ವರ ಹೆಗಡೆ
ಮೊಬೈಲ್‌: 9482233924

***

ನಮ್ಮ ದೇಶದ ಸಂಸ್ಕೃತಿಯಲ್ಲಿ ಮಠಮಂದಿರಗಳ ಪಾತ್ರ ದೊಡ್ಡದು. ಅವು ನಮ್ಮ ಜನಜೀವನದ ಮೇಲೆ ಸಾವಿರಾರು ವರ್ಷಗಳಿಂದ ಪ್ರಭಾವವನ್ನು ಮೂಡಿಸುತ್ತ ಬಂದಿವೆ.

ADVERTISEMENT

ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕುಗಳಲ್ಲೂ ಮಠಗಳನ್ನು ಸ್ಥಾಪಿಸಿ, ಅವುಗಳ ಮೂಲಕ ತಮ್ಮ ಸಿದ್ಧಾಂತದ ಪ್ರಸಾರ ನಿರಂತರವಾಗಿರುವಂಥ ವ್ಯವಸ್ಥೆಯನ್ನು ರೂಪಿಸಿದರು. ಈ ನಾಲ್ಕು ಮಠಗಳ ಜೊತೆಗೆ ಕಾಲಾನಂತರದಲ್ಲಿ ಹಲವು ಮಠಗಳು ಸ್ಥಾಪನೆಯಾದವು; ಅದ್ವೈತದ ಪ್ರಸಾರದಲ್ಲಿ ತೊಡಗಿಕೊಂಡವು. ಇಂಥ ಮಠಗಳಲ್ಲಿ ಒಂದು ನೆಲೆಮಾವುಮಠ.

ನೆಲೆಮಾವು ಮಠ ನಮ್ಮ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ನೆಲೆಮಾವು ಎಂಬ ಊರಿನಲ್ಲಿದೆ. ಈ ಮಠ ಸ್ಥಾಪನೆಯಾಗಿ ಸುಮಾರು ಏಳುನೂರು ವರ್ಷಗಳಾಗಿವೆ; ಈ ಗುರುಪೀಠದಲ್ಲಿ ಇಪ್ಪತ್ತೈದು ಯತಿವರೇಣ್ಯರು ವಿರಾಜಮಾನರಾಗಿದ್ದಾರೆ. ಈ ಮಠದ ಇತಿಹಾಸ ಮತ್ತು ಗುರುಪರಂಪರೆಯ ಬಗ್ಗೆ ಗಣೇಶ ಭಟ್ಟ ಹೋಬಳಿ ಅವರ ಈ ಪುಸ್ತಕ ತುಂಬ ಮಾಹಿತಿಯನ್ನು ನೀಡುತ್ತದೆ. ಕೆಲವರು ಯತಿಗಳ ಬಗ್ಗೆಯೂ ಸಂಕ್ಷಿಪ್ತ ಜೀವನಚರಿತ್ರೆ ಇಲ್ಲಿದೆ; ಐತಿಹಾಸಿಕ ದಾಖಲೆಗಳೂ ಸಾಕಷ್ಟಿವೆ. ಜೊತೆಗೆ ದಕ್ಷಿಣಾಮೂರ್ತಿ ಸ್ತೋತ್ರ, ಲಕ್ಷ್ಮೀನರಸಿಂಹಪಂಚರತ್ನ, ಋಣಮೋಚನನೃಸಿಂಹ ಸ್ತೋತ್ರ, ದೇವೀ ಅಪರಾಧಕ್ಷಮಾಪಣ ಸ್ತೋತ್ರ, ಲಕ್ಷ್ಮೀನರಸಿಂಹಕರುಣಾರಸ ಸ್ತೋತ್ರಗಳ ಪ್ರತಿಪದಾರ್ಥ ಸಹಿತ ಅನುವಾದವನ್ನೂ ನೀಡಲಾಗಿದೆ. ಶಾಂಕರಪೀಠಗಳ ಬಗ್ಗೆ ಕುತೂಹಲಾಸಕ್ತಿ ಇರುವವರೆಲ್ಲರೂ ಗಮನಿಸಬೇಕಾದ ಕೃತಿಯಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.